ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Wednesday, July 28, 2021

ಸಾವು

ಆ ದಿನ ಸಾಯಬೇಕೆಂದು ನಿರ್ಧರಿಸಿದ್ದ.

ಒಂದು ಉಪನ್ಯಾಸಕ್ಕೆ ಆಹ್ವಾನ ಬಂದಿತ್ತು. ಹಾಡಿಯ ಯುವಕರಿಗೆ 'ಆತ್ಮವಿಶ್ವಾಸ ಹೆಚ್ಚಿಸುವುದು ಹೇಗೆ?' ಎಂಬ ವಿಷಯದ ಕುರಿತು ಉಪನ್ಯಾಸ ಕೊಡಬೇಕಿತ್ತು.

ರೋಮಗಳು ನಿಮಿರಿ ನಿಲ್ಲುವ ಹಾಗೆ ಮಾತನಾಡಿದ. ಯುವಕರು ರೋಮಾಂಚನಗೊಂಡರು. ಅವರೊಳಗೆ ಬದುಕುವ ಛಲ ಹುಟ್ಟಿತು.ಅವರ ಕನಸುಗಳು ಗರಿಗೆದರಿದವು.

ಮಾತಿನ ವೀಡಿಯೊ ವೈರಲ್ ಆಯಿತು. ಅವನಿಗೆ ಅದನ್ನು ನೋಡುವ ಮನಸ್ಸಾಗಲಿಲ್ಲ.

ಮನೆಗೆ ಬಂದು ಕೊರಳಿಗೆ ಹಗ್ಗ ಕಟ್ಟಿ ಸತ್ತ. ಸಾಯುವ ಮುನ್ನ ಬರೆದ: ' ಬದುಕುವುದಕ್ಕಿಂತಲೂ ಸಾಯುವಾಗ ಹೆಚ್ಚಿನ ಆತ್ಮವಿಶ್ವಾಸ ಬೇಕು'.

*


ಕಾಜೂರು ಸತೀಶ್

No comments:

Post a Comment