ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Sunday, July 11, 2021

ಚುನಾವಣೆ

ರಂಗನು ಚುನಾವಣೆಗೆ ನಿಂತನು. ಹೆಚ್ಚಿನ ಜನರಿಗೆ ಅವನ ಪರಿಚಯ ಇರಲಿಲ್ಲ. ಆದರೆ, ಅವನು 'ಅಕ್ಷಯ ಪಾತ್ರೆ' ಗುರುತಿನ ಪಕ್ಷವನ್ನು ಪ್ರತಿನಿಧಿಸಿದ ಕಾರಣದಿಂದಾಗಿ ಚುನಾವಣೆಯಲ್ಲಿ ಜಯಿಸಿದನು.

ಮಾತು ಕೊಟ್ಟಂತೆ ತನ್ನ ಕಾರ್ಯಕರ್ತರಿಗೆ ಸರ್ಕಾರದ ಎಲ್ಲಾ  ಸೌಲಭ್ಯಗಳನ್ನು ಕೊಡಿಸಿದನು. ಕಾರ್ಯಕರ್ತರ ಜೀವನಮಟ್ಟ ಸುಧಾರಿಸಿತು. ಐದು ವರ್ಷಗಳಲ್ಲಿ ರಂಗನ ಸಾಧನೆಯು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತು. 

ರಂಗನು ಶ್ರೀಮಂತನಾದನು. ಅವನ ಗೌರವ ಹೆಚ್ಚಿತು.

ಮುಂದಿನ ಚುನಾವಣೆಯಲ್ಲಿ ಕಾರ್ಯಕರ್ತನಾಗಿದ್ದ ಒಬ್ಬನಿಗೆ ಸೀಟು ಸಿಕ್ಕಿತು. ಅವನು ಹೆಚ್ಚಿನ ಮತ ಪಡೆದು ಗೆಲುವು ಸಾಧಿಸಿದನು. ಅವನ ಮನೆಯವರು ಮತ್ತು ಕಾರ್ಯಕರ್ತರು ಸಂಭ್ರಮಿಸಿದರು!
*



ಕಾಜೂರು ಸತೀಶ್ 

No comments:

Post a Comment