ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Wednesday, April 7, 2021

ಅರ್ಜಿ



ಅರ್ಜಿ ಕೊಟ್ಟು ಸ್ವೀಕೃತಿ ಪಡೆದು..

ಒಂದು ಮಳೆಗಾಲ ಆಕಾಶದಿಂದ ಬಿದ್ದು ತಲೆಯೊಡೆದುಕೊಂಡು ಆಸ್ಪತ್ರೆ ಸೇರಿತ್ತು
ಬೇಸಿಗೆಯು ಬೆವರಿ ಬೆವರಿ ಮೈಸುಟ್ಟು ಕಪ್ಪಾಗಿ ಮೂರ್ಛೆ ಹೋಗಿತ್ತು
ಚಳಿಗಾಲಕ್ಕೆ ಮದುವೆಯಾಗಿ ಮೂರ್ನಾಲ್ಕು ಮಕ್ಕಳು - 'ಕಂಯ್ಯೋ..'

ಒಂದು ತಡರಾತ್ರಿ ನಿದ್ದೆ ಹತ್ತಿತ್ತು

ಭಯಾನಕ ಕನಸು!
ನಾನವರ ರಕ್ತ ಹೀರುತ್ತಿದ್ದೆ!
ರಕ್ತಕ್ಕೆ ಬೆವರ ನಾತ
ನೂರು ಸಾವಿರ ಮಂದಿ ಒಂದಾದ ರಕುತ
ಅಲ್ಲಲ್ಲಿ ಸೂರ್ಯಗುಳ್ಳೆ ಥಳಥಳ ತಳತಳ
ಸಾಸಿವೆಯಿದ್ದಿದ್ದರೆ ಚಿಟಿಚಿಟಿಚಿಟಿ
ಆಹಾ.. ಕರಿಬೇವು ಇದ್ದಿದ್ದರೆ..

ಅದರಲ್ಲಿದ್ದ ನನ್ನ ರಕುತವೂ ನಾಲಗೆಗೆ ತಾಗಲು..
ಎಚ್ಚರಗೊಂಡೆ

ಕತ್ತಲು ಕೆಂಪಾಗಿತ್ತು
ಮೂಡಣ ಸೂರ್ಯ!
*



ಕಾಜೂರು ಸತೀಶ್

No comments:

Post a Comment