ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Monday, April 5, 2021

ಆ ಮೇಷ್ಟ್ರು , ಮೌಲ್ಯ ಮತ್ತು ಭ್ರಷ್ಟಾಚಾರ

ಕನ್ನಡ ವಿಷಯವನ್ನು ಬೋಧಿಸುತ್ತಿದ್ದರು. ಸಹಜವಾಗಿ ಪುನರ್ ಆವರ್ತನೆಯಾಗುವ 'ಕ್ಯಾಸೆಟ್ ಸಂಪ್ರದಾಯ' ಇವರಲ್ಲೂ ಇತ್ತು. ಮೌಲ್ಯದ ಕುರಿತು ಅವರು ಕೆಲವೊಮ್ಮೆ ಮಾತನಾಡುತ್ತಿದ್ದರು. ವಿಕೃತ ಜೀವಿಗಳು ಆ ಸಂಸ್ಥೆಯಲ್ಲಿ ಇಂತಹ ಪವಿತ್ರ ಕೆಲಸಕ್ಕೆ ಬಂದದ್ದರಿಂದ, ಇವರು ನಮಗೆ ಆದರ್ಶ ವ್ಯಕ್ತಿಯಾಗಿಯೇ ಇದ್ದರು.

ಒಂದು ಕಾರ್ಯಕ್ರಮವನ್ನು ಸಂಘಟಿಸುವ ಜವಾಬ್ದಾರಿ ಅವರ ಹೆಗಲಿಗೇರಿದಾಗ, 'ಹಣ' ಅವರ ಕಣ್ಣಲ್ಲಿ ನಲಿದಾಡುತ್ತಿದ್ದದ್ದು ಕಾಣಿಸಿತು. ಆದರೆ, ಅದೇನೂ ನಮಗೆ ಆಗ ಮಹತ್ವದ ಸಂಗತಿಯಾಗಿರಲಿಲ್ಲ.
*
ಮೇಷ್ಟ್ರು(ಕಲಿಸುವ ಎಲ್ಲರಿಗೂ ಅನ್ವಯ) ಭ್ರಷ್ಟರಾಗುವುದು ಎಂದರೆ ಸಹಿಸಲು ಅಸಾಧ್ಯವಾದ ಸಂಗತಿ. ಯಾರೂ ಅದನ್ನು ಒಪ್ಪಲಾರರು;ಒಪ್ಪಬಾರದು.

ಇಂದು, ಅವರ ಕುರಿತ ಭ್ರಷ್ಟಾಚಾರದ ಯಶೋಗಾಥೆಯನ್ನು ಕೇಳಿಸಿಕೊಳ್ಳುತ್ತಿದ್ದೆ.
ಹಣದ ಹಸಿವು ಅವರನ್ನು ಯಾವ ಮಟ್ಟಕ್ಕೆ ಇಳಿಸಿದೆ ಎಂಬುದನ್ನು ನೆನಪಿಸಿಕೊಂಡಾಗ ನನ್ನೊಳಗಿನ ಖಿನ್ನತೆಯು ಎದ್ದು ನಿಲ್ಲಲು ಹವಣಿಸಿತು.(ಅದರ ಕತ್ತು ಹಿಸುಕಿದೆ)

RIP dear Sir!
*

ಕಾಜೂರು ಸತೀಶ್

No comments:

Post a Comment