ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Sunday, January 10, 2021

ಚರ್ಚೆ



ಪ್ರಸಿದ್ಧ ಸಾಹಿತಿ ಜ್ಞಾನಾನಂದರು ತಮ್ಮ ಗೆಳೆಯ ಗುಣಶೀಲರನ್ನು ಭೇಟಿಯಾಗಿ ಸಾಮಾಜಿಕ ಅಸಮಾನತೆಯ ಕುರಿತು ಚರ್ಚಿಸಿ ಅದನ್ನು  ಸರ್ಕಾರಕ್ಕೆ ವರದಿ ಮಾಡಲು ನಿರ್ಧರಿಸಿದರು.

ಹೇಳದೇ ಹೋಗಬೇಕೆಂದುಕೊಂಡರೂ ಗುಣಶೀಲರಿದ್ದ ತೋಟದ ಮನೆಯಲ್ಲಿ ಸಿಗಿದುಹಾಕುವ ನಾಯಿಗಳಿದ್ದುದರಿಂದ ಬರುವ ಸುದ್ದಿಯನ್ನು ಮೊದಲೇ ಮುಟ್ಟಿಸಿದರು.

ಗೇಟಿನ ಬಳಿ ಬಂದೊಡನೆ ಡ್ರೈವರ್ ಗೆ ' ಬರುವಾಗ ಕಾಲ್ ಮಾಡ್ತೇನೆ ಸ್ವಿಚ್ ಆಫ್ ಮಾಡ್ಕೋಬೇಡ' ಎಂದು ಹೇಳಿ ಒಳಗೆ ಹೋದರು. ಒಳಗೆ ಅದ್ದೂರಿಯ ಸ್ವಾಗತ ಲಭಿಸಿತು. ಒಬ್ಬರು ಕೆಲಸಗಾರರನ್ನು ಇವರ ಸತ್ಕಾರಕ್ಕೆಂದು ನಿಯೋಜಿಸಲಾಗಿತ್ತು.

ಸ್ವಲ್ಪ ಹೊತ್ತು ಕಳೆದ ಮೇಲೆ ಅವರ ಚರ್ಚೆ ಆರಂಭವಾಯಿತು. ಗೇಟಿನ ಬಳಿ ನಿಂತಿದ್ದ ಡ್ರೈವರ್ ಗೆ ಅದು ಕೇಳಿಸಿದರೂ ಏನೂ ಅರ್ಥವಾಗಲಿಲ್ಲ.

ಮಧ್ಯಾಹ್ನ ಹಸಿವು ಕಾಡತೊಡಗಿದಾಗ ಎಲ್ಲಾದರೂ ಏನಾದರೂ ತಿನ್ನಲು ಸಿಗಬಹುದೇ ಎಂದು ಹುಡುಕಿ ನಡೆದರು ಡ್ರೈವರ್ . 'ಇಲ್ಲಿಂದ ಎಂಟು ಕಿಲೋಮೀಟರ್ ಹೋಗ್ಬೇಕು' ಎಂದರು ಸ್ಥಳೀಯರೊಬ್ಬರು.

ಹಿಂತಿರುಗಿ ಬಂದ ಡ್ರೈವರ್, ಕಾರಿನೊಳಗೆ ಕುಳಿತು ನೀರು ಕುಡಿದು ಕಣ್ಣುಮುಚ್ಚಿ ಮನಸ್ಸಿಗೆ  ನಿದ್ದೆಯನ್ನು ತಂದುಕೊಂಡರು. 

ಚರ್ಚೆ ಮುಗಿದಿರಲಿಲ್ಲ.
*


ಕಾಜೂರು ಸತೀಶ್ 

No comments:

Post a Comment