ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Tuesday, December 29, 2020

ಮದುವೆ ದಿನವೇ ನೇತ್ರದಾನ/ದೇಹದಾನದ ನಿರ್ಣಯ!

ಆಡಂಬರದ ಅಮಲಲ್ಲಿ ತೇಲುತ್ತಿರುವ ಕಾಲದಲ್ಲಿ ಈ ಇಬ್ಬರು ದೇಹದಾನ/ನೇತ್ರದಾನ ಮಾಡುವ ನಿರ್ಣಯದೊಂದಿಗೆ ತಮ್ಮ ಮದುವೆಯನ್ನು 'ಆಚರಿಸಿ'ಕೊಂಡರು! ಜೊತೆಗೆ ಕವನಸಂಕಲನದ ಬಿಡುಗಡೆ, ಪರಿಸರ ಸ್ನೇಹಿ ಪದಾರ್ಥಗಳ ಬಳಕೆ.


ಕಿರಗಂದೂರಿನ ಗೌತಮ್ ಮತ್ತು ಸುಮನ ಅರಕಲಗೂಡು  ಅವರ ಕುರಿತ ಮಾತಿದು. ಈ ಇಬ್ಬರ ಜೀವಪರ ಕಾಳಜಿ ಮತ್ತು ಅದರ ಅನುಪಾಲನೆ ನನ್ನನ್ನು ಕಾಡಿತು.

                        ***
ಸುಮನ ಅರಕಲಗೂಡು  ಅವರ ಪರಿಣಯ
ಸಂಕಲನಕ್ಕೆ (ದಿನೇಶ್ ಅವರು ನೀಡಿದ್ದು) ತೆರೆದುಕೊಂಡೆ. ಪ್ರೀತಿಯಿಂದ ಗೆಲ್ಲಲಾಗದ್ದು ಪ್ರಪಂಚದಲ್ಲಿ ಯಾವುದೂ ಇಲ್ಲ ಎನ್ನುವ ನಿಲುವಿನವರು ಸುಮನಾ. ಮತ್ತಷ್ಟೂ ಓದಿಕೊಂಡಲ್ಲಿ ಇವರ ಕಾವ್ಯಕ್ರಮ ಮಾಗಬಲ್ಲದು.

ಗೌತಮ್-ಸುಮನ , ಅಭಿನಂದನೆಗಳು  ಈ ಸಂಚಲನಕ್ಕಾಗಿ.
*

- ಕಾಜೂರು ಸತೀಶ್

1 comment: