ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Wednesday, December 16, 2020

ಪ್ರಾಮಾಣಿಕತೆ, ಸೋಮಾರಿತನ, ಅಸಮಾನತೆ ಇತ್ಯಾದಿ

ಮೊನ್ನೆ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನೌಕರರು ಬೀದಿಗಿಳಿದು ಪ್ರತಿಭಟಿಸುತ್ತಿದ್ದರು. ಅವರ ಬೇಡಿಕೆಗಳು ನ್ಯಾಯಯುತವೇ ಆಗಿದ್ದವು.

ಒಬ್ಬ ಚಾಲಕ/ನಿರ್ವಾಹಕ ಸೋಮಾರಿತನವನ್ನು ಪ್ರದರ್ಶಿಸಿದರೆ ಹೇಗಿರುತ್ತದೆ?! ಪೂರ್ಣ ಪ್ರಮಾಣದ ತ್ಯಾಗವಿಲ್ಲದೆ ಆ ಕೆಲಸವನ್ನು ನಿರ್ವಹಿಸಲು ಸಾಧ್ಯವೇ ? ಅಂಥವರ ಬೇಡಿಕೆಗಳನ್ನು ಈಡೇರಿಸಲಿಲ್ಲವೆಂದರೆ..
*


ಒಂದು ಜಾಥಾ ಕಾರ್ಯಕ್ರಮ. ಆಶಾ/ ಅಂಗನವಾಡಿ ಕಾರ್ಯಕರ್ತರ ಒಂದು ಗುಂಪು, ಸರ್ಕಾರಿ ನೌಕರರ ಮತ್ತೊಂದು ಗುಂಪು . ಅವರೆಲ್ಲಾ ಪಟ್ಟಣದ ರಸ್ತೆಯಲ್ಲಿ ನಡೆದುಕೊಂಡು ಹೋಗಬೇಕಿತ್ತು. 

ಮೊದಲ ಗುಂಪಿನಿಂದ ಯಾವುದೇ ತಕರಾರುಗಳು ಬರಲಿಲ್ಲ. ಬಿರಬಿರನೆ ನಡೆಯುತ್ತಿದ್ದರು. ಪುಟಿದೇಳುವ ಉತ್ಸಾಹ!

ಎರಡನೇ ಗುಂಪಿನಿಂದ ತಕರಾರುಗಳ ಸುರಿಮಳೆ- 'ನಮ್ಮನ್ನು ಹೀಗೆ ನಡೆಸುವುದೇ? ನಮಗೆ ಸಮಸ್ಯೆಗಳಿಲ್ಲವೇ? ಕಾಲು ನೋಯುವುದಿಲ್ಲವೇ...'

ಆ ಜಾಥಾದಿಂದ ಯಾರಿಗೂ ಉಪಯೋಗವಾಗಿರಲಿಕ್ಕಿಲ್ಲ, ನಿಜ. ಆದರೆ ಮೊದಲ ಗುಂಪಿಗೆ ಸಾಧ್ಯವಾದ ಉತ್ಸಾಹ, ಮತ್ತೊಂದು ಗುಂಪಿಗೆ ಯಾಕೆ ಸಾಧ್ಯವಾಗಲಿಲ್ಲ?
*

ಒಂದು ವರ್ಗ ಬೆವರು ಹರಿಸಿ ದುಡಿಯುತ್ತದೆ ಮತ್ತು ಸಿಗುವ ಅಲ್ಪ ಸಂಭಾವನೆಯಲ್ಲಿ ಬದುಕನ್ನು ಕಟ್ಟಿಕೊಳ್ಳಲು ಹೆಣಗಾಡುತ್ತದೆ. ಮತ್ತೊಂದಕ್ಕೆ ಕೆಲಸ ಮಾಡಬೇಕೆಂದೇನೂ ಇಲ್ಲ(ಮಾಡಿದರೂ ಅಷ್ಟೂ ಜನರ ಹೊರೆ ಕೆಲವರ ಹೆಗಲಲ್ಲಿ). ಅದಕ್ಕಾಗಿ ಸಿಗುವ ಸಾಕಷ್ಟು ಸಂಭಾವನೆಯು ಸರಳ ಜೀವನದಿಂದಾಚೆಗೆ ಕೊಂಡೊಯ್ದು ಮತ್ತಷ್ಟೂ ಸೋಮಾರಿತನವನ್ನು ಹುಟ್ಟುಹಾಕುತ್ತದೆ.
*

ಒಂದೇ ಕೆಲಸವನ್ನು ನಿರ್ವಹಿಸುವಲ್ಲಿ ಏರ್ಪಡುವ ಈ ಅಸಮಾನತೆಯು ಡೆಮಾಕ್ರಟಿಕ್ ವ್ಯವಸ್ಥೆಯಂತೂ ಅಲ್ಲವೇ ಅಲ್ಲ.

ಬದಲಾಗುವುದು ಯಾವಾಗ?
*



ಕಾಜೂರು ಸತೀಶ್

No comments:

Post a Comment