ಕೊಡಗು ಜಿಲ್ಲೆಯ ಕರಿಕೆ ಗ್ರಾಮದ 'ಪಟ್ಟಿ'ಯಲ್ಲಿ ಹುಟ್ಟುವ ನದಿಯೊಂದು ಕಾಸರಗೋಡು ಸಮೀಪದ 'ಕಳನಾಡು'[ಮೇಲ್ಪರಂಬ್ ] ಎಂಬಲ್ಲಿ ಅದ್ಭುತ ದೃಶ್ಯಕಾವ್ಯವನ್ನು ಸೃಷ್ಟಿಸುತ್ತದೆ.

ಈಚೆಗೆ,ಗೆಳೆಯ ಭರಮಪ್ಪ ಪಾಶಗಾರರೊಂದಿಗೆ ಅದನ್ನು ಹುಡುಕಿ ಹೊರಟಾಗ , ಇದೆಯೋ ಇಲ್ಲವೋ ಎಂಬತ್ತಿದ್ದ 'ಚಂದ್ರಗಿರಿ ಕೋಟೆ' ನಮ್ಮನ್ನು ಸ್ವಾಗತಿಸಿತು.

ಮಿನಿ ಬೇಕಲ ಕೋಟೆಯಂತಿರುವ ಅದು,ಪ್ರವಾಸಿಗರನ್ನು ಸೆಳೆಯಲು ಮಾತ್ರ ವಿಫಲವಾಗಿದೆ. ಹೀಗಾಗಿ, ಅವತ್ತು ಅಲ್ಲಿ ನಮ್ಮಿಬ್ಬರದೇ ರಾಯ'ಭಾರ'!

ಕ್ರಿ.ಶ. ಹದಿನೇಳನೇ ಶತಮಾನದಲ್ಲಿ ಶಿವಪ್ಪ ನಾಯಕ ಕಟ್ಟಿಸಿದ ಕೋಟೆಯದು.

ಅಲ್ಲಿಂದ ತುಸು ದೂರದಲ್ಲಿ ಚಂದ್ರಗಿರಿಯ ವೈಭವೋಪೇತ ನರ್ತನ, ರೈಲು ಹಾದುಹೋಗಲು ನಿರ್ಮಿಸಿದ ಸುಂದರ ಸೇತುವೆ, ಸುರಂಗ ಮಾರ್ಗ, ಸೀಗಡಿ ಮೀನು ಹಿಡಿಯುವ ಮಂದಿ..ಇವೆಲ್ಲಾ ಕಣ್ಣಿಗೆ ಅಂಟಿ ನಿಂತು ನರ್ತಿಸುತ್ತವೆ. ನಡೆದೇ ಹೋಗುವುದಾದರೆ-ಒಂದೂವರೆ ಕಿಲೋ ಮೀಟರ್ ಸಾಗಿದರೆ ಕಾಸರಗೋಡು ರೈಲ್ವೆ ನಿಲ್ದಾಣ.

ಅಂದು ನಮ್ಮಿಬ್ಬರ ಖಿನ್ನತೆಗೆ ಮದ್ದು ಸಿಕ್ಕಿತ್ತು!
**
-ಕಾಜೂರು ಸತೀಶ್

ಈಚೆಗೆ,ಗೆಳೆಯ ಭರಮಪ್ಪ ಪಾಶಗಾರರೊಂದಿಗೆ ಅದನ್ನು ಹುಡುಕಿ ಹೊರಟಾಗ , ಇದೆಯೋ ಇಲ್ಲವೋ ಎಂಬತ್ತಿದ್ದ 'ಚಂದ್ರಗಿರಿ ಕೋಟೆ' ನಮ್ಮನ್ನು ಸ್ವಾಗತಿಸಿತು.

ಮಿನಿ ಬೇಕಲ ಕೋಟೆಯಂತಿರುವ ಅದು,ಪ್ರವಾಸಿಗರನ್ನು ಸೆಳೆಯಲು ಮಾತ್ರ ವಿಫಲವಾಗಿದೆ. ಹೀಗಾಗಿ, ಅವತ್ತು ಅಲ್ಲಿ ನಮ್ಮಿಬ್ಬರದೇ ರಾಯ'ಭಾರ'!

ಕ್ರಿ.ಶ. ಹದಿನೇಳನೇ ಶತಮಾನದಲ್ಲಿ ಶಿವಪ್ಪ ನಾಯಕ ಕಟ್ಟಿಸಿದ ಕೋಟೆಯದು.

ಅಲ್ಲಿಂದ ತುಸು ದೂರದಲ್ಲಿ ಚಂದ್ರಗಿರಿಯ ವೈಭವೋಪೇತ ನರ್ತನ, ರೈಲು ಹಾದುಹೋಗಲು ನಿರ್ಮಿಸಿದ ಸುಂದರ ಸೇತುವೆ, ಸುರಂಗ ಮಾರ್ಗ, ಸೀಗಡಿ ಮೀನು ಹಿಡಿಯುವ ಮಂದಿ..ಇವೆಲ್ಲಾ ಕಣ್ಣಿಗೆ ಅಂಟಿ ನಿಂತು ನರ್ತಿಸುತ್ತವೆ. ನಡೆದೇ ಹೋಗುವುದಾದರೆ-ಒಂದೂವರೆ ಕಿಲೋ ಮೀಟರ್ ಸಾಗಿದರೆ ಕಾಸರಗೋಡು ರೈಲ್ವೆ ನಿಲ್ದಾಣ.

ಅಂದು ನಮ್ಮಿಬ್ಬರ ಖಿನ್ನತೆಗೆ ಮದ್ದು ಸಿಕ್ಕಿತ್ತು!
**
-ಕಾಜೂರು ಸತೀಶ್
No comments:
Post a Comment