ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Tuesday, August 20, 2024

ಗೋಷ್ಠಿ

ತಮ್ಮ ದೇಶ ಅಷ್ಟು ಹಿಂದುಳಿದಿರುವುದನ್ನು ಗಮನಿಸಿದ ಚಿಂತಕರೆಲ್ಲಾ ಸೇರಿ ಗೋಷ್ಠಿಯೊಂದನ್ನು ಏರ್ಪಡಿಸಿದರು.

ಹಲವು ವಾದ-ಸಿದ್ಧಾಂತಗಳನ್ನು ವಿದ್ವಾಂಸರು ಮಂಡಿಸುತ್ತಿದ್ದರು. ನೂರಾರು ಹೊಳವುಗಳನ್ನು ಬಿಚ್ಚಿಡುತ್ತಿದ್ದರು.

ಪ್ರಶ್ನೋತ್ತರ ಸಮಯದಲ್ಲಿ ತಿಮ್ಮನಿಗೆ ಮೈಕು ಸಿಕ್ಕಿತು.
"ಚುನಾವಣೆಯು ಹಣ-ಆಮಿಷಗಳಿಲ್ಲದೆ ನಡೆಯಲಿ. ಕೊಡುವುದು-ಪಡೆಯುವುದು ಎರಡೂ ನಿಲ್ಲಬೇಕು. ನಿಮ್ಮಿಂದ ಅದು ಸಾಧ್ಯವೇ?"ಕೇಳಿದ.

ಅಲ್ಲಿಗೆ ಘೋಷ್ಠಿ ನಿಂತು ಹೋಯಿತು.
*

✍️ಕಾಜೂರು ಸತೀಶ್

No comments:

Post a Comment