ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Sunday, April 9, 2023

ಕೊಲೆ

ಕಲಾವಿದನ ಮೇಲೆ ಒಂದು ವರ್ಗದವರಿಗೆ ಸಿಟ್ಟಿತ್ತು. ಕೊಲ್ಲೋಣವೆಂದರೆ ಜನರು ಹೋರಾಟಕ್ಕಿಳಿಯುತ್ತಾರೆ ಎಂಬ ಭಯ ಅವರಲ್ಲಿತ್ತು.

ಒಂದು ಉಪಾಯ ಹೂಡಿದರು. ಕಲಾವಿದನ ನೆಂಟರ ಪಟ್ಟಿ ತಯಾರಿಸಿದರು. ಅವರಿಗೆ ಆಮಿಷವೊಡ್ಡಿ ಒಬ್ಬರಾದ ಮೇಲೊಬ್ಬರು ಕಲಾವಿದನ ಮನೆಗೆ ತೆರಳಿ ಅಲ್ಲಿದ್ದು ಬರಲು ತಿಳಿಸಲಾಯಿತು.

ಕಲಾವಿದ ಆತ್ಮಹತ್ಯೆ ಮಾಡಿಕೊಂಡ.
*
ಕಾಜೂರು ಸತೀಶ್ 

No comments:

Post a Comment