ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Sunday, December 19, 2021

ಕಣ್ಣಲ್ಲಿಳಿದ ಮಳೆಹನಿಯ ಕುರಿತು ಶಿವಾನಂದ ಉಳ್ಳಿಗೇರಿ

ನಿಮ್ಮ ಕವನ ಸಂಕಲನ ಕಣ್ಣಲ್ಲಿಳಿದ ಮಳೆಹನಿ ಓದಿದೆ.
ತುಂಬಾ ಒಳ್ಳೆಯ ಕವಿತೆಗಳನ್ನು ಬರೆದಿರುವಿರಿ ಮೊದಲಿಗೆ ತಮಗೆ ಅಭಿನಂದನೆಗಳು.

ತುಂಬಾ ಸೊಗಸಾದ ಆಕರ್ಷಕ ಮುಖಪುಟ ಹಾಗೂ ಶೀರ್ಷಿಕೆ.

ಪುಟ ತೆರೆದು ಒಂದೊಂದೆ ಕವಿತೆಗಳನ್ನು ಓದಲಾರಂಭಿಸಿದರೆ ನಿರಂತರವಾಗಿ ಓದಿಸಿಕೊಂಡು ಹೋಗುವ ಉತ್ತಮ, ಅರ್ಥಪೂರ್ಣ ವಿಶಿಷ್ಟವಾದ ಕವಿತೆಗಳು.
ಕವಿತೆಯ ವಿಷಯ, ಕಾವ್ಯ ಶೈಲಿ, ಭಾಷೆ ಎಲ್ಲವೂ ತುಂಬಾ ಚೆನ್ನಾಗಿದೆ. ಎಲ್ಲ ಕವಿತೆಗಳನ್ನು ಓದಿ ಖುಷಿಯಾಯ್ತು.

ನಿಮ್ಮಿಂದ ಇನ್ನಷ್ಟು ಕವನ ಸಂಕಲನಗಳು ಮೂಡಿ ಬರಲಿ
ಶುಭವಾಗಲಿ ತಮಗೆ
💐💐💐💐💐
*

ಶಿವಾನಂದ ಉಳ್ಳಿಗೇರಿ

ಕವಿ, ಶಿಕ್ಷಕ
ಬೈಲಹೊಂಗಲ, ಬೆಳಗಾವಿ.

No comments:

Post a Comment