ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Sunday, October 3, 2021

ಒಂದು ಬಹುಪರಾಕ್ ಕವಿತೆ



ನನ್ನ ರಕ್ತ ಹೀರಲು ಬರುವ ಸೊಳ್ಳೆಗಳೇ
ನಿಮ್ಮ ಕುರಿತು ಕವಿತೆ ಬರೆದು ಮಾನ ಕಳೆವೆನು

ಕವಿಗಳೆಲ್ಲರೂ ಓದುವ ಪತ್ರಿಕೆಗೆ ಕಳಿಸಿ
ದುಂಬಾಲುಬಿದ್ದು ಪ್ರಕಟಿಸುವವರೆಗೂ ಬಿಡೆನು

ಸಿಗುವ ಸಂಭಾವನೆಯಲ್ಲಿ ಕವಿಗೋಷ್ಠಿ ನಡೆಸುವೆನು
ಹಿರಿಯ ಕವಿಗಳಿಗೆ ಹಾರಗಳನ್ನರ್ಪಿಸುವೆನು

ಹೋಗಿರಿ ಬಸ್ ನಿಲ್ದಾಣಗಳಿಗೆ ಹೋಗಿರಿ ರೈಲು ನಿಲ್ದಾಣಗಳಿಗೆ
ಹೋಗಿರಿ  ಸ್ಲಮ್ಮುಗಳಿಗೆ ಹೋಗಿರಿ ಗುಡಿಸಲುಗಳಿಗೆ

ನನಗಿಲ್ಲಿ ಕೆಲಸವಿದೆ ಕವಿತೆ ಬರೆವ ಕೆಲಸ
ನೋಡಿ ಇಲ್ಲಿ ನಿದ್ದೆಗೆಟ್ಟು ಬರೆಯುತ್ತಿದ್ದೇನೆ
 ನನ್ನ ಕಣ್ಣುಗಳ ಮೇಲಾದರೂ ಕರುಣೆಯಿರಲಿ
*



ಕಾಜೂರು ಸತೀಶ್ 

No comments:

Post a Comment