ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Sunday, August 20, 2023

ಸ್ವಾತಂತ್ರ್ಯ

ಮುಖ್ಯಮಂತ್ರಿಗಳೊಂದಿಗೆ ಸಂವಾದಕ್ಕೆ ರಾಜ್ಯದ ಐದು ಮಂದಿಯಲ್ಲಿ ಸಾಹಿತಿ ತಿಮ್ಮನಿಗೂ ಅವಕಾಶ ಸಿಕ್ಕಿತ್ತು.

ಈ ಸಂದೇಶವನ್ನು ಜಾಲತಾಣಗಳಲ್ಲಿ ಹಂಚಿಕೊಂಡ. ಹಲವರಿಂದ ಅಭಿನಂದನೆಗಳ ಮಳೆ ಸುರಿದವು. ಅವರೆಲ್ಲಾ ಆಡಳಿತ ಪಕ್ಷದ ಸಾಹಿತಿಗಳಾಗಿದ್ದರು.

ಅಷ್ಟೇ ಪ್ರಮಾಣದಲ್ಲಿ ನೀನು ಹೋಗಬೇಡ ಎಂದರು. ಅವರು ವಿರೋಧಪಕ್ಷದ ಸಾಹಿತಿಗಳಾಗಿದ್ದರು.
*
ಕಾಜೂರು ಸತೀಶ್

No comments:

Post a Comment