ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Wednesday, February 8, 2023

ಎಡ-ಬಲ

ನಿಲ್ದಾಣ ಬಂದಿತು. ಊಟ ಮಾಡಲು ಸಮಯ ಸಿಗಲಿಲ್ಲ. ನೀರು ಕುಡಿಯದೆ ಹೊಟ್ಟೆ ಸುಟ್ಟಿತ್ತು. ಪಕ್ಕದಲ್ಲಿದ್ದ ಹುಡುಗನಿಗೆ ಸೀಟು ಕಾಯ್ದಿರಿಸಲು ತಿಳಿಸಿ ಒಂದು ನೀರು ಬಾಟಲಿ ತರಲು ಬಸ್ಸು ಇಳಿದೆ.

ಹುಡುಗ ಹಿಂದಿನ ನಿಲ್ದಾಣದಲ್ಲಿ ಹತ್ತಿದ್ದ. ತನ್ನ ಗುಂಪಿಗೆ ಕೆಲವರು ಸೇರುತ್ತಿಲ್ಲವೆಂದೂ, ತನ್ನ ಹಾಗೆ ಅವರು ಚಿಂತಿಸುತ್ತಿಲ್ಲವೆಂದೂ ಫೋನಿನಲ್ಲಿ ಯಾರೊಂದಿಗೋ ಹೇಳುತ್ತಿದ್ದ: 'ನಿಮ್ಮ ಯೋಚನಾಕ್ರಮವೇ ಸರಿಯಿಲ್ಲ...'

ನೀರು ತಂದು ನಿಟ್ಟುಸಿರು ಚೆಲ್ಲಿದೆ. ಮುಚ್ಚಳ ತೆಗೆದೆ. ಅಷ್ಟರಲ್ಲಿ 'ನೀರು' ಎಂದ ಆ ಹುಡುಗ. ಕೊಟ್ಟೆ.

ಅವನು ಮಗುವಿನ ಹಾಗೆ ನೀರು ಕುಡಿದ. ಒಂದು ಹನಿ ಉಳಿಸಿದ್ದ. 'Sorry ಜಾಸ್ತಿ ಕುಡಿದುಬಿಟ್ಟೆ' ಎಂದ.

ಬಸ್ಸು ಹೊರಟಿತು. ಬಾಟಲಿಯಲ್ಲಿ ಉಳಿದ ಆ ಹನಿ ಕರುವಿನ ಹಾಗೆ ಚಂಗನೆ ಕುಣಿದು ಕುಪ್ಪಳಿಸುತ್ತಿತ್ತು.ಬೆರಗಿನಿಂದ ಅದನ್ನೇ ನೋಡಿದೆ.

*
ಕಾಜೂರು ಸತೀಶ್

No comments:

Post a Comment