ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Tuesday, December 3, 2019

Whatsapp ಮತ್ತು ಗುಮಾಸ್ತೀಕರಣ

ತಂತ್ರಜ್ಞಾನದಲ್ಲಿ ನಮ್ಮ ಬೆಳವಣಿಗೆಯನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ದೈಹಿಕ ಮತ್ತು ಬೌದ್ಧಿಕ ಶ್ರಮವನ್ನು ಕಡಿಮೆ ಮಾಡುವ ಅವು ಒಂದು ಕೆಲಸವನ್ನು ಶೀಘ್ರವಾಗಿ ಮುಗಿಸಿಕೊಡುವಲ್ಲಿ ನೆರವಾಗುತ್ತವೆ. ಈ ಬೆಳವಣಿಗೆಯನ್ನು ಮೆಚ್ಚಲೇಬೇಕು!


ನಾವೆಲ್ಲಾ ಬೆನ್ನುತಟ್ಟಿಕೊಳ್ಳುವ ತಂತ್ರಜ್ಞಾನವು ಇಂದು ಇಂಡಿಯಾದ ಎಲ್ಲಾ ಸರಕಾರಿ ನೌಕರರನ್ನು ಗುಮಾಸ್ತರನ್ನಾಗಿಸಿದೆ. ಇಡೀ ಕೆಲಸಗಳೆಲ್ಲ ದಾಖಲೀಕರಣದ ನಿಮಿತ್ತವಾಗಿಯೇ ನಡೆಯುತ್ತಿದೆ. ಅದಕ್ಕಾಗಿ ಒಬ್ಬರು ಮತ್ತೊಬ್ಬರ ಮೇಲೆ ತಮ್ಮ ಅಧಿಕಾರವನ್ನು ಹೇರಬೇಕಾಗುತ್ತದೆ. ಶ್ರೇಣೀಕರಣದ ಅಡಿಯಿಂದ ಮುಡಿಯವರೆಗೆ ಹಬ್ಬಿಕೊಂಡಿರುವ ಈ ಪ್ರಕ್ರಿಯೆಯು ಕೆಲಸವನ್ನು ಮತ್ತಷ್ಟೂ ಜಟಿಲವಾಗಿಸುತ್ತಿದೆ.

ಅಧಿಕಾರಿಯಾದವರು ಕಾಲ್ ಸೆಂಟರ್ ನೌಕರರ ಹಾಗೆ ಕರೆ ಸ್ವೀಕರಿಸಬೇಕು, ಟೈಪಿಸ್ಟಿನ ಹಾಗೆ ಸಂದೇಶ ಕುಟ್ಟಬೇಕು ಇತ್ಯಾದಿ. ಹೀಗಾದಾಗ ಮಾಡಬೇಕಿರುವ ನಿಜದ ಕೆಲಸಗಳೆಲ್ಲಾ ಹಳ್ಳ ಹಿಡಿಯುತ್ತವೆ!

whatsapp ಈ ವ್ಯವಸ್ಥೆಯನ್ನು ನಿಜಕ್ಕೂ ಬುಡಮೇಲು ಮಾಡಿಬಿಡುತ್ತದೆ.

No comments:

Post a Comment