ತಿಮ್ಮ ದಾರಿಯಲ್ಲಿ ಹೋಗುತ್ತಿದ್ದಾಗ ಕಾರುಗಳು ಒಂದಾದ ಮೇಲೆ ಒಂದರಂತೆ ಹೋಗುತ್ತಿದ್ದವು.
ಕೈ ತೋರಿಸಿ ಕಾರು ನಿಲ್ಲಿಸಿ ವಿಚಾರಿಸಿದ ತಿಮ್ಮ.
"ಎಲ್ಲಿಗೆ?"
"ಕವಿಗೋಷ್ಠಿಗೆ"
"ಅಲ್ಲಿ ಏನು ಮಾಡುವುದು?"
"ಕವಿತೆ ಓದುವುದು"
"ನಾನೂ ನೋಡಲು ಬರಲೇ?"
"ಬನ್ನಿ".
ಅಲ್ಲಿಂದ ಮರಳಿದ ಮೇಲೆ ತಿಮ್ಮ ಹೀಗೆ ಬರೆದ :
ನಾಲ್ಕು ಪದಗಳಿದ್ದರೆ ಒಂದು ಕವಿತೆ ಬರೆಯಬಹುದು - 'ಭಾವ, ಆತ್ಮ, ಮಧುಬಟ್ಟಲು ಮತ್ತು ಪ್ರೀತಿ'.
'ಅದರ ಜೊತೆಗೆ ಒಂದು ಮೊಬೈಲ್ ಇರಬೇಕು!'
*
✍️ಕಾಜೂರು ಸತೀಶ್