ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Saturday, April 21, 2018

ಸೇತುರಾಮ್ ಅವರ 'ನಾವಲ್ಲ' ಕಥಾಸಂಕಲನ

ಹೆಸರಾಂತ ನಾಟಕಕಾರ, ನಟ, ನಿರ್ದೇಶಕ ಶ್ರೀ ಸೇತುರಾಮ್ ಅವರ 'ನಾವಲ್ಲ' ಕಥಾಸಂಕಲನವು ನಾನು ಓದಿದ ಮಹತ್ವದ ಕೃತಿಗಳಲ್ಲೊಂದು.

ಸಂಕಲನದಲ್ಲಿರುವ ಆರು ಕಥೆಗಳೂ ಓದುಗರನ್ನು ತೀವ್ರವಾಗಿ ಕಾಡಿಸುವಂಥವುಗಳು. ನಮ್ಮ ಸಜ್ಜನಿಕೆಯ ಮುಖವಾಡಗಳನ್ನು ಕಳಚಿಡುವ ಕಥನಗಳವು. ನಮ್ಮೊಳಗಿನ ಪ್ರಜ್ಞೆಯನ್ನು ಎಬ್ಬಿಸುವ 'ಮನಸ್ಸಿನ ಮಾತು'ಗಳವು.

ಅಭೂತಪೂರ್ವ ಕಥೆ ಹೇಳುವ ಶೈಲಿ, ಕೆಂಡದುಂಡೆಗಳಂಥ ಭಾಷೆ ಮತ್ತು ಸಂಭಾಷಣೆಗಳಿಂದಾಗಿ ಈ ಕೃತಿಯು ನಾಲ್ಕು ಮುದ್ರಣಗಳನ್ನು ಕಂಡಿದೆ. ಅವರ 'ಕಾತ್ಯಾಯಿನಿ'ಯು ಕನ್ನಡ ಕಥಾಪರಂಪರೆಯ ಪ್ರಮುಖ ಕಥೆಗಳ ಸಾಲಿಗೆ ಸೇರಬಲ್ಲ ಕಥೆ.

ಹೆಣ್ಣಿನ ಆತ್ಮವನ್ನು ಧರಿಸಿ ಮಾತನಾಡುವ ಸೇತುರಾಮ್ ಅವರ ಕಥೆಗಳು ಹೆಣ್ಣಿನ ಮೇಲಾಗುವ ದೌರ್ಜನ್ಯಗಳನ್ನು ಅತಿಸೂಕ್ಷ್ಮವಾಗಿ,  ಸಶಕ್ತವಾಗಿ ವಿವರಿಸುತ್ತವೆ. ಕೌಟುಂಬಿಕ, ಧಾರ್ಮಿಕ ಮತ್ತು ರಾಜಕೀಯ ವ್ಯವಸ್ಥೆಗಳಲ್ಲಿರುವ ಕ್ರೌರ್ಯ ಮತ್ತು ಅಸಮಾನತೆಗಳನ್ನು ಆಳವಾಗಿ ವಿಶ್ಲೇಷಿಸುತ್ತವೆ.

ಸ್ವಯಂ ಭ್ರಷ್ಟರಾಗಿದ್ದುಕೊಂಡು 'ನಾವಲ್ಲ' ಎನ್ನುತ್ತಾ ಮತ್ತೊಬ್ಬರ ಭ್ರಷ್ಟತೆಯನ್ನು ಬಯಲಿಗೆಳೆಯಲು ಹೊರಡುವ ನಮ್ಮಂಥವರ ಮುಖವಾಡಗಳು ಇಲ್ಲಿ ಬಟಾಬಯಲಾಗುತ್ತವೆ.

ತಾಯ್ತನವನ್ನು ತುಂಬಿಕೊಂಡ , ಮಾನವೀಯತೆಗಾಗಿ ಹಪಹಪಿಸುವ ಕಥೆಗಳಿವು.
*

ಕಾಜೂರು ಸತೀಶ್

No comments:

Post a Comment