ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Saturday, May 20, 2017

'ಕಡಲ ಕರೆ' ಅನುವಾದಿತ ಮಲಯಾಳಂ ಕವಿತೆಗಳ ಕುರಿತು ಡಾ.ಅಶೋಕ್ ಕುಮಾರ್ ಅನಿಸಿಕೆ

​ಪ್ರಿಯ ಸತೀಶ್,

ಇದೀಗ ಕಡಲ ಕರೆ ಕೈಸೇರಿದೆ.​

​ನಿಮ್ಮ ಮುನ್ನುಡಿಯ ಮೇಲೆ ಕಣ್ಣಾಡಿಸಿದೆ. ಬಲು ಆಪ್ತವಾಗಿ ಪ್ರಬುದ್ಧವಾಗಿ ಬರೆದಿದ್ದೀರಿ. ಹಲವು ಅನುವಾದಕರ ಹಲಬಗೆಯ ಅನುವಾದಗಳ ಸುರಿಮಳೆಯಾಗುತ್ತಿರುವ ​​ಈ ಕಾಲದಲ್ಲಿ , ಕವಿತೆಗೆ ಓದುಗರ ಬಾಹುಳ್ಯ ಇಲ್ಲದ ವಾಸ್ತವದಲ್ಲಿ, ಅನೇಕ ಸಹೃದಯ ಕವಿಗಳ( ಎರಡೂ ಭಾಷೆಗಳ) ಸಂಪರ್ಕ,ಸ್ನೇಹ ಬೆಳೆಸಿ ಸಫಲರಾಗಿ, ಕು.ಭಾ.ಭಾ ಪ್ರಾಧಿಕಾರ ಕವಿತೆಯ ಪುಸ್ತಿಕೆ ಹೊರತರುವಂತೆ ಮಾಡಿರುವ ತಮ್ಮ ಸಾಧನೆ ಅಪಾರ. ಅದ್ಭುತ. ಎಲ್ಲ ಪ್ರೋತ್ಸಾಹಕರನ್ನೂ ಮರೆಯದೆ ನೆನೆದು ಬರೆದು ದೊಡ್ಡ ಗುಣ ಮೆರೆದಿದ್ದೀರಿ. ( ದೊಡ್ಡವರನೇಕರು ಮನಃಪೂರ್ವಕ ತಾವು ಮೇಲೇರಿದ ಏಣಿಯನ್ನು ತುಳಿದು ದೂರಾಗಿಸಿ ಮುಸಿನಗುವ ದೃಶ್ಯ ಈಗ ನಿತ್ಯದ ಹಾಡು ).


ಅನುವಾದಕರಿಗೆ ಭಿನ್ನ ವಿಭಿನ್ನ ದೃಷ್ಟಿಕೋನ ಇದ್ದರೂ ಸ್ವಾತಂತ್ರ್ಯ ಕೆಲವೊಮ್ಮೆ ಸಾಧ್ಯವಾದರೂ ಸ್ವೇಚ್ಛೆ ಸರ್ವಥಾ ಸಲ್ಲದು ಎಂಬುದೇ ನನ್ನ ಅಭಿಮತ.
ಅಹಂಕಾರಕ್ಕೂ ಬೊಕ್ಕತನಕ್ಕೂ ಮದ್ದಿಲ್ಲ ಎಂಬ ಗಾದೆಯನ್ನು ನೆನಪಿಗೆ ತರುವಂತಹ ಅನೇಕ ಅನುವಾದಾಪರಾಧಿಗಳು ನಮ್ಮ ನಡುವೆಯೇ ಇರುವುದರಿಂದ ಈ ಮಾತು ನಾ ಹೇಳಬೇಕಾಯಿತು. ತಮ್ಮಂತಹ ವಿನಯಶೀಲರನ್ನು ಕಂಡಾಗ ತಂಗಾಳಿ ತೀಡಿದನುಭವವಾಗುತ್ತಿದೆ.

ಗದ್ಯ, ಪದ್ಯ, ನಾಟಕ, ಲೇಖನ ಇತ್ಯಾದಿ ಅನುವಾದಗಳು ಬಗೆ ಬಗೆಯ ಸವಾಲುಗಳ್ನ್ನು ಒಡ್ಡ ಬಹುದು. ಈ ಕುರಿತು ' ಓದುಗ, ನೋಡುಗ, ಕೇಳುಗ' ಅಥವಾ ರಸಿಕರದೇ ಅಂತಿಮ ನಿರ್ಣಯ ಎಂಬ ಗಿರೀಶ್ ಕಾರ್ನಾಡ್ ರ ನಿಲುವೇ ನನ್ನದೂ ಸಹ.
*


ಡಾ. ಅಶೋಕ್ ಕುಮಾರ್

No comments:

Post a Comment