ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Thursday, May 16, 2019

ಮೋಸ

ಹರಿವು ನಿಲ್ಲಿಸಿ
ಸಾಯುವ ಕಡೇ ಕ್ಷಣದಲ್ಲಿ
ನದಿಯು ಹಾದಿಯೊಡನೆ ಉಸುರಿತು:

'ಸಮುದ್ರವನ್ನು ನೋಡಲು ಸಾಧ್ಯವಾದರೆ
ನಾನು ಶ್ರಮಿಸಿದ್ದೆ ಎಂದು ಹೇಳಬೇಕು'

ಅಷ್ಟರಲ್ಲಾಗಲೇ
ಹಾದಿಯ ಮರಳಕಣ
ಮರುಭೂಮಿಯೊಡನೆ
ರಹಸ್ಯ ಮಾತುಕತೆ ಆರಂಭಿಸಿತ್ತು!
*

 #ಮಲಯಾಳಂ ಮೂಲ- ಜಿನೇಶ್ ಮಡಪ್ಪಳ್ಳಿ

#ಕನ್ನಡಕ್ಕೆ - ಕಾಜೂರು ಸತೀಶ್

3 comments: