ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Friday, July 13, 2018

ಯಾನ ಮುಗಿಸಿದ ಮಂಜುನಾಥ

ಆಗಷ್ಟೇ  ಫೇಸ್ಬುಕ್ಕಿಗೆ ಮುಖ ತೋರಿಸಿದ್ದೆ. ಎಲ್ಲೆಲ್ಲೋ ಹರಿದು ಹಂಚಿಹೋದವರೆಲ್ಲ ಒಟ್ಟಿಗೆ ಠಿಕಾಣಿ ಹೂಡತೊಡಗಿದ್ದ ಕಾಲ.

ಒಂದು ಹೊಸ ಹೆಸರಿನ 'ರಿಕ್ವೆಸ್ಟ್' ಬಂದಿತ್ತು. 'ಯಾರು?' ಎಂದು ಯೋಚಿಸುತ್ತಿರುವಾಗಲೇ ಇನ್ಬಾಕ್ಸಿಗೆ ಒಂದು ಸಂದೇಶ!

ಎಂದೋ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ನನ್ನ ಕವಿತೆಯನ್ನು ನೆನಪಿಟ್ಟುಕೊಂಡು ಬದುಕುತ್ತಿದ್ದವರೊಬ್ಬರು ಸಿಕ್ಕರು.

ಕುತೂಹಲದಿಂದ ಅವರ ಕವಿತೆಗಳನ್ನು ಓದಿದೆ. ಕವಿತೆಗಳ ಮೇಲಿರುವ ನನ್ನ ನಕಾರಾತ್ಮಕ ಧೋರಣೆಯಿಂದಲೋ ಏನೋ, ಅಷ್ಟೇನೂ ಕಾಡಲಿಲ್ಲ.

ಅವರ ಮೊದಲ ಕಥಾಸಂಕಲನ 'ಮುಗಿಲ ಮಾಯೆಯ ಕರುಣೆ' ನನ್ನ ಕೈಸೇರಿತು. ಅವರ ಕಥಾಪ್ರತಿಭೆಯ ಎದುರು ಮೂಕನಾದೆ; ರೋಮಾಂಚನಗೊಂಡೆ!

ಸ್ವಲ್ಪ ದಿನಗಳ ನಂತರ ಕೇಂದ್ರವೇ ಇಲ್ಲದ ನನ್ನ ಕತೆಯೊಂದನ್ನು ಕಳಿಸಿದ್ದೆ. ಕತೆ ಇಷ್ಟವಾಗದ್ದನ್ನು ತಿಳಿಸಿದರು. ಅವರ ಪ್ರಾಮಾಣಿಕತೆಯನ್ನು ತುಂಬಾ ಮೆಚ್ಚಿಕೊಂಡೆ.

ಮೊನ್ನೆ ಮೊನ್ನೆ ಬದುಕನ್ನು ಬದುಕಲಾರದೆ ಹೋಗಿಬಿಟ್ಟರು. ಒಂದು ಸೂಚನೆಯನ್ನು ಕೂಡ ನೀಡಲಿಲ್ಲ. ಕರುಣೆಯಿಲ್ಲದ ಬದುಕು ಅವರನ್ನು ನುಂಗಿ ಗಟಗಟ ನೀರು ಕುಡಿದಿತ್ತು!

ಪ್ರಿಯ ಮಂಜುನಾಥ ಪಿ. ಬೆಳಗಾವಿ ( Manjunath P Belagavi), ಹೀಗಾಗಬಾರದಿತ್ತು!

No comments:

Post a Comment