ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Saturday, December 3, 2016

ಹಿಂಸೆ

ಇಷ್ಟು ದಿನ ಅವರು ಒಟ್ಟಿಗಿದ್ದರು. ಇವನು ಕವಿತೆಗಳ ಕುರಿತು ಸೊಲ್ಲೆತ್ತಿದಾಗ, ಅವರು ಹಣದ ಕುರಿತು ಮಾತನಾಡುತ್ತಿದ್ದರು. ಇವನು ಹಸಿವಿನ ಕುರಿತು ಮಾತನಾಡಿದಾಗ, ಅವರು ಬಾಡೂಟದ ಕುರಿತು ಮಾತನಾಡುತ್ತಿದ್ದರು. ಇವನ ಕಥೆ-ಕವಿತೆಗಳು ಅರ್ಧಕ್ಕೆ ತಲುಪಿದಾಗ, ಅವರು ರಾಜಕೀಯದ ಮಾತೆತ್ತಿ ಅದನ್ನು ಸಾಯಿಸಿಬಿಡುತ್ತಿದ್ದರು.

ಅವರೆಲ್ಲ ಹೋದಮೇಲೆ ಹುಟ್ಟಿದ ದಟ್ಟ ಮೌನ ಎಷ್ಟು ಖುಷಿಕೊಡತೊಡಗಿತು ಎಂದರೆ, ಇವನಿಗೆ ಕುಣಿದಾಡಬೇಕೆನಿಸಿತು. ಅವರಿದ್ದಾಗ ಅರಿವಾಗದ ಅವರು ಕೊಡುತ್ತಿದ್ದ ಹಿಂಸೆ ಈ ಖುಷಿಯಲ್ಲಿ ಮತ್ತೆ ಮತ್ತೆ ಕಾಡತೊಡಗಿತು. ಇಷ್ಟು ಕಾಲ ಇಂತಹ ಪರಮ ಸುಖವನ್ನು ಕಳೆದುಕೊಂಡೆನಲ್ಲಾ ಎಂದು ಕ್ಷಣಕ್ಷಣವೂ ಕೊರಗಿ ಆಸ್ಪತ್ರೆ ಸೇರಿದ ಮತ್ತು ಸತ್ತೇ ಹೋದ.

ಅವರು ಮತ್ತೆ ಬಂದರು!
*

ಕಾಜೂರು ಸತೀಶ್

No comments:

Post a Comment