ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Wednesday, July 13, 2016

ದಿನಚರಿ - 22


ಅವರು ನಮ್ಮ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷರು. ಸಣ್ಣ ಪ್ರಾಯ.

ಆ ಮನುಷ್ಯನಿಗೆ ನನ್ನ ಮೇಲೆ ಒಂದು ಬಗೆಯ ಅವ್ಯಕ್ತ ಪ್ರೀತಿ. ' ನೀವು ಯಾವಾಗ ಹೇಳ್ತೀರೋ ಆಗ, ಒಂದಿನ ಮುಂಚೆ ಹೇಳಿ ಸಾಕು... ಮಕ್ಳನ್ನೂ ಕರ್ಕೊಂಡ್ಹೋಗೋಣ' ಎನ್ನುತ್ತಾ ದೂರದಲ್ಲಿದ್ದ ಆ ಬೆಟ್ಟವನ್ನು ಕತ್ತನ್ನೆತ್ತಿ ನೋಡುತ್ತಿದ್ದರು.

ಕಳೆದ ವರ್ಷವು 'ಈ' ಮಳೆಯ ಹಾಗೆ ಜಾರಿಹೋಯಿತು. ಈ ವರ್ಷದ ಅಕ್ಟೋಬರ್ಗೆ ಅದನ್ನು ಮುಂದೂಡಿದ್ದೆ.

ಮೊನ್ನೆ ಅವರ ಶವ ನೋಡಲು ಹೋಗಿದ್ದೆ! ಊರ ತುಂಬೆಲ್ಲಾ ಮನುಷ್ಯರ ಜೀವವನ್ನು ನೆಕ್ಕಿ ನೋಡಲು ಬಂದ 'ಡೆಂಗಿ'ಯ ನಾಲಗೆಗೆ ಅವರ ಜೀವವೂ ತಗುಲಿಬಿಟ್ಟಿತ್ತು!

ಈಗ ಪ್ರೀತಿಯಷ್ಟೇ ಉಳಿದಿದೆ. ಜೊತೆಗೆ ಕೆ.ಕೆ. ರಾಮಚಂದ್ರ ಎಂಬ ಆ ಹೆಸರೂ...

ದೂರದಲ್ಲಿರುವ ಆ ಬೆಟ್ಟ ಮತ್ತಷ್ಟೂ ದೂರದಲ್ಲಿರುವಂತೆ ಕಾಣಿಸುತ್ತಿದೆ!
*
-ಕಾಜೂರು ಸತೀಶ್

2 comments:

  1. This comment has been removed by the author.

    ReplyDelete
  2. ಹುಟ್ಟಿನಲ್ಲಿ ಸಂತಸ
    ಸಾವಿನಲ್ಲಿ ಶೋಕ
    ಹೋಯಿತೊಂದು ಜೀವ
    ಬಿಟ್ಟು ಈ ಲೋಕ

    ಹುಟ್ಟಿನಲ್ಲಿ ಆನಂದ
    ಸಾವಿನಲ್ಲಿ ಕಂಬನಿ
    ನನ್ನ ಪ್ರೀತಿಸಿದ ಜೀವ
    ಬಿಟ್ಟು ಹೋಯಿತು ಧರಣಿ

    ಹುಟ್ಟಿನಲ್ಲಿ ಸಂಭ್ರಮ
    ಸಾವಿನಲ್ಲಿ ಸಂಕಟ
    ನಾ ಪ್ರೀತಿಸಿದ ಜೀವಕೆ
    ಮುಂದಿಲ್ಲ ಲೋಕದ ಜಂಜಾಟ

    ReplyDelete