ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Friday, April 29, 2016

ಐದು ಕಿರುಗವಿತೆಗಳು

ಮರಗಳು ಓದದೆ ಉಳಿಸಿದ
ಎಲೆಗಳನ್ನು
ಮಳೆ ಓದುತ್ತದೆ.
*

ಹುಳುವಿನಷ್ಟು ಚೆನ್ನಾಗಿ
ಹೂವನ್ನು ಬಲ್ಲ
ಯಾವ ಚಿಟ್ಟೆಯೂ ಭೂಮಿಯಲ್ಲಿಲ್ಲ.
*

ಚಿಟ್ಟೆಗಳಿಗಾಗಿ ಕಾದೂ ಕಾದೂ
ದಣಿದ ಹೂದೋಟ
ಹುಡುಕಲು ಹಾರತೊಡಗಿದೆ.
*

ಪ್ರೀತಿಯನ್ನು ತುಂಬಿಕೊಳ್ಳುವ ನರವ್ಯೂಹ
ಅಣೆಕಟ್ಟಿನಂತೆ ಒಡೆಯದಿರಲು
ಈ ಬಾಹುಗಳ ಬಾಗಿಲು ತೆರೆದಿಟ್ಟಿದ್ದೇನೆ.
*

ಕುರ್ಚಿ ಹೇಳುವ ಕತೆಗಳಲ್ಲಿ ಬೇರುಗಳಿರುವುದಿಲ್ಲ
ಆದರೆ ಅವು ಬೇರುಗಳ ನೆನಪಿಟ್ಟುಕೊಳ್ಳುತ್ತವೆ
ಕುರ್ಚಿಯಲ್ಲಿ ಕೂರುವವರ ಒಳಗೆ
ಅವು ಹಬ್ಬಿಕೊಳ್ಳುತ್ತವೆ.
*

ಮಲಯಾಳಂ ಮೂಲ- ಡೋನಾ ಮಯೂರ

ಕನ್ನಡಕ್ಕೆ- ಕಾಜೂರು ಸತೀಶ್

എന്റെ അകത്തേക്കു കയറുംബോള്

കാലിങ് ബെല് ഇല്ലെങ്കിലും
എന്റെ വാരിയെല്ലീനെ തട്ടിയാല് മതി -
ഞാന് വാതില് തുറക്കുന്നു .


മൊട്ടാവുന്ന,വിടരുന്ന
എല്ലാം ഹൃദയങ്ങള്ക്കും ഒരേ ഒരു നിറം
എന്റെ വീട്ടില് പൈന്റ്റ൪ പുരട്ടിയതും അതേ നിറം .


എന്റെ കുടലിന്റെ പായ് വിരിക്കുന്നു.
നിങ്ങള് അതില് ഇരിക്കുക, വിശ്രമിക്കുക.
തലച്ചോറ് , ഹൃദയം ,രക്തത്തിന്റെ കുറിച്ചു
ചര്ച്ച നടത്തുക.


എന്റെ വീട്ടിനെ പൂട്ട് ഇല്ല -
നിങ്ങള് എപ്പോഴെങ്കിലും വരാം .
മഴക്കാലത്ത് തകര്ന്നു വീണാല്
മണ്ണിന്റെ അകത്തു എന്റെ വീട് .
അവിടെ നഖം, രോമം ,എല്ലിനെ പറ്റി ചര്ച്ച ചെയ്യുക .


എന്റെ വീട്ടിന്റെ അകത്തെ സ്നേഹം
ഏതു മഴയിലും, കാറ്റിലും തകര്ക്കാനാവില്ല.
കാലിങ് ബെല് ഇല്ലെങ്കിലും
കാറ്റിന്റെ വാതില് തട്ടി അവിടേക്ക് വരിക .
**

-കാജൂരു സതീശ്

Wednesday, April 27, 2016

ಪ್ರಯಾಣದ ನಂತರ

ಯಾತ್ರೆ ಮುಗಿಸಿ ಮನೆಗೆ ಬಂದು ಅವಳಲ್ಲಿ ಕೇಳಿದ

'ಬಟ್ಟೆಯಂಗಡಿಯಲ್ಲಿ ನೀನು ಸೀರೆ ತಗೋತಿದ್ದಾಗ ಆ ಚೆಲುವ ಸೇಲ್ಸ್ ಮ್ಯಾನ್ ನಿನ್ನ ಕಣ್ಣುಗಳನ್ನೇ ನೋಡ್ತಿದ್ನಲ್ವಾ?'

'ನೀನು ರಸ್ತೆಯಲ್ಲಿ ಹೋಗ್ತಿದ್ದಾಗ ನಿನ್ನ ನೆರಳನ್ನು ತುಳೀತಾ ಹಿಂದೆ ಬರ್ತಿದ್ದವ್ರ್ಯಾರು?'

' ರಸ್ತೆ ಬದಿಯ ಮರದ ನೆರಳಲ್ಲಿ ತಲೆ ಬಗ್ಗಿಸಿ ಏನನ್ನೂ ನೋಡದೆ ನೀನು ನಡೆದು ಬರ್ತಿದ್ದಾಗ ನಿನ್ನೊಳಗೆ ಇದ್ದಿದ್ದಾದ್ರೂ ಏನು?'

ಅವಳು ಉತ್ತರಿಸುವ ಗೋಜಿಗೇ ಹೋಗಲಿಲ್ಲ.

ಅದರ ಬದಲಿಗೆ ತನ್ನ ಆಭರಣಗಳನ್ನು ಕಳಚಿಡುವ ಹಾಗೆ ಒಂದೊಂದೇ ಅಂಗಗಳನ್ನು ಕಳಚಿಟ್ಟಳು.
ಮೊದಲು ಕಣ್ಣು, ಕಿವಿ, ಮೂಗು
ಆಮೇಲೆ ತಲೆ, ಕತ್ತು...

ಎಲ್ಲ ಕಳಚಿ ಹಾಸಿಗೆಯಲ್ಲಿ ಹರಡಿದಳು.

ಅವನು ಅವೆಲ್ಲವನ್ನೂ ಒಂದೊಂದಾಗಿ ತೆಗೆದು ಚೀಲದಲ್ಲಿ ಕಟ್ಟಿ ಅಲಮಾರಿನಲ್ಲಿಟ್ಟು ಬೀಗಹಾಕಿದ.

ಈಗ ಅವಳಿಲ್ಲ.

ಅವನ ಮಾತುಗಳು ವೇದಿಕೆಯಲ್ಲಿ ಮಾರ್ದನಿಸುತ್ತಿವೆ- 'ಫೆಮಿನಿಸಂ.. ಫೆಮಿನಿಸಂ'
*

ಮಲಯಾಳಂ ಮೂಲ- ಪಿ.ಕೆ. ಪಾರಕ್ಕಡವು

ಕನ್ನಡಕ್ಕೆ- ಕಾಜೂರು ಸತೀಶ್


Saturday, April 23, 2016

ನಾನು

ನಾನು
ಕಾಡಲ್ಲಿ ಕುಳಿತು,
ಸಮುದ್ರ ತೀರದಲ್ಲಿ ಕುಳಿತು
ಕವಿತೆ ಬರೆಯುತ್ತೇನೆ.

ನೆಲವಿಲ್ಲದವರಿಗೆ,
ಮನೆಯಿಲ್ಲದವರಿಗೆ,
ನನ್ನ ಕಾಡತೊರೆಯ ಬಳಿಬಂದು ನಿಂತವರಿಗೆ,
ನನ್ನ ಶತ್ರುಗಳಿಗೆ,
ಮಿತ್ರರಿಗೆ,
ನನ್ನಂಥ ದುಃಖಿತರಿಗೆ
ಅದನ್ನು ಹಂಚಿಕೊಡುತ್ತೇನೆ.
*

ಮಲಯಾಳಂ ಮೂಲ- ಎ. ಅಯ್ಯಪ್ಪನ್

ಕನ್ನಡಕ್ಕೆ- ಕಾಜೂರು ಸತೀಶ್

Friday, April 22, 2016

ನೋವು

ಭೂಮಿಯನ್ನು ನೋಯಿಸಿ
ಕಲ್ಲುಕುಟಿಗನಾದೆ
ಎರೆಹುಳುವನ್ನು ನೋಯಿಸಿ
ಬೆಸ್ತನಾದೆ
ನಿನ್ನನ್ನು ನೋಯಿಸಿ
ಕಾಮುಕನಾದೆ.

ಇವತ್ತು
ನನ್ನನ್ನೇ ನೋಯಿಸಿ ನೋಯಿಸಿ
ನಾನೊಬ್ಬ ಕವಿಯಾದೆ.
*

ಮಲಯಾಳಂ ಮೂಲ- ಪವಿತ್ರನ್ ತೀಕ್ಕುನಿ

ಕನ್ನಡಕ್ಕೆ- ಕಾಜೂರು ಸತೀಶ್

Tuesday, April 19, 2016

೧೯೪೭

ಅವನು ಸತ್ತ ಮೇಲೆ
ತನ್ನ ನೆತ್ತಿಯೊಳಗೆ ಹೊಕ್ಕಿದ್ದ
ಗುಂಡುಗಳನ್ನು ಹೊರತೆಗೆದ.

ಚರಕ ತಿರುಗಿಸುತ್ತಿದ್ದ ಮುದುಕನಲ್ಲಿ
ಮಗು ಕೇಳಿತು:
'ಇದರಲ್ಲಿ ಎಷ್ಟಿವೆ ಹೇಳಿ ನೋಡೋಣ?'

ಮುದುಕ ಯೋಚಿಸಿ ಹೇಳಿದ-
'೧'

ಮಗು ತಲೆ ಅಲ್ಲಾಡಿಸಿ ಹೇಳಿತು-
'ಊಹೂಂ'.

'೯'
'ಅಲ್ಲ'.

'೪'
'ಅಲ್ಲವೇ ಅಲ್ಲ'

'೭'
ಅವರಿಬ್ಬರೂ ಒಟ್ಟಿಗೆ ನಕ್ಕರು.

ಮುದುಕ ತನ್ನೆದೆಯ ಮೇಲೆ ಬೆರಳಾಡಿಸಿದ
ಈಗ ಒಂದು ಕೆಂಪು ಹೂವಿದೆ ಅಲ್ಲಿ
ಒಂದು ಬಂದೂಕಿನ ಗೋಲಿಯೂ.
*

ಮಲಯಾಳಂ ಮೂಲ- ಆರ್. ರತೀಶ್ ಕೃಷ್ಣ

ಕನ್ನಡಕ್ಕೆ- ಕಾಜೂರು ಸತೀಶ್

Monday, April 18, 2016

ಐಡಿ ಕಾರ್ಡ್

ನಾನಾಗ ವಿದ್ಯಾರ್ಥಿಯಾಗಿದ್ದೆ
ಒಬ್ಬಳು ಹುಡುಗಿ ನನ್ನ ನೋಡಿ ನಕ್ಕಳು.

ಅವಳು ತರುತ್ತಿದ್ದ ಅನ್ನ, ಬಂಗುಡೆ ಮೀನಿನ ಸಾರಿನ ಮೇಲೆ
ನಮ್ಮಿಬ್ಬರ ಕೈಗಳು ಅನ್ನ-ಸಾರಿನಂತೆ ಬೆರೆತವು.

ನಾವಿಬ್ಬರು ಒಂದು ಬೆಂಚಿನಲ್ಲಿ
ಹಿಂದೂ-ಕ್ರಿಶ್ಚಿಯನ್ ಕುಟುಂಬದವರಾದೆವು.

ನಾನು ನೆರೂಡನ ಕವಿತೆಗಳನ್ನು ಓದುತ್ತಾ ಸಾಗಿದೆ
ಆ ನಡುವೆ ನನ್ನ -ಐಡಿ ಕಾರ್ಡ್- ಕಳೆದುಹೋಯಿತು.

ನನ್ನ -ಐಡಿ ಕಾರ್ಡ್- ಕೊಟ್ಟು ಅವಳೆಂದಳು:
ನೀನು ಸ್ಟೈಫಂಡ್ ಪಡೆದ ವಿವರ
ಕೆಂಪು ಶಾಯಿಯಲ್ಲಿ ಬರೆದಿದ್ದಾರಲ್ವಾ ಅದರಲ್ಲಿ.

ಈ ಕಾಲದಲ್ಲಿ ಒಬ್ಬ ಹುಡುಗ, ಒಬ್ಬಳು ಹುಡುಗಿ
ಮರೆತುಬಿಡುವುದನ್ನು ನೋಡಿಲ್ಲ ನಾನು.
ಸ್ವಲ್ಪ ಹೊತ್ತಲ್ಲೇ ಅವರು ಬೇರ್ಪಡುತ್ತಾರೆ.
ಅವರು ಒಂದಾದರೂ ಆಶ್ಚರ್ಯವಿಲ್ಲ ನನಗೆ.
ಅವರ ಐಡಿ ಕಾರ್ಡಿನಲ್ಲಿ
ಕೆಂಪು ಶಾಯಿಯಲ್ಲಿ ಬರೆದ ಅಕ್ಷರಗಳಿರುವುದಿಲ್ಲ.
*

ಮಲಯಾಳಂ ಮೂಲ- ಎಸ್. ಜೋಸೆಫ್

ಕನ್ನಡಕ್ಕೆ- ಕಾಜೂರು ಸತೀಶ್

Saturday, April 16, 2016

ಹೊರಗೆ

ಬಾಗಿಲು ಮುಚ್ಚಿ ಚಿಲಕ ಹಾಕಿ
ಕವಿತೆ ಬರೆಯಲು ಕುಳಿತೆ.

ಹೊರಗೆ:
ಬೀಸುವ ತಂಗಾಳಿ,
ಹಬ್ಬಿರುವ ತೆಳು ಬೆಳದಿಂಗಳು,
ಮಳೆ ನೆನೆಯುತ್ತಾ ನಿಂತಿರುವ ಒಂದು ಸೈಕಲ್
ಮತ್ತು
ಮನೆಗೆ ಓಡಿಬರುತ್ತಿರುವ ಒಂದು ಮಗು.

ನಾನೊಂದು ಕವಿತೆ ಬರೆದೆ.
ಗಾಳಿಯಿಲ್ಲದ, ಬೆಳದಿಂಗಳಿಲ್ಲದ,
ಸೈಕಲ್ ಇಲ್ಲದ, ಮಗುವಿಲ್ಲದ
ಮತ್ತು
ಬಾಗಿಲೇ ಇಲ್ಲದ ಒಂದು ಕವಿತೆ.
*

ಹಿಂದಿ ಮೂಲ- ಮಂಗಳೇಶ್ ಡಬರಾಲ್

ಕನ್ನಡಕ್ಕೆ- ಕಾಜೂರು ಸತೀಶ್

Wednesday, April 13, 2016

ಕೊಂಕಣಿಗೆ ಅನುವಾದಗೊಂಡ ಒಂದು ಕವಿತೆ

ಭೋವ್ ಥೊಡ್ಯಾ ಉತ್ರಾಂನಿ ಕಾಂಯ್ ಗುಂಡಾಯೆಚ್ಯಾ ಅರ್ಥ್ಯಾಚ್ಯೊ ಸಭಾರ್ ಕಾಣ್ಯೊ ಸಾಂಗೊನ್ ವೆಚಿ ಕಲಾ ಫಕತ್ತ್ ಎಕಾ ಕವಿಕ್ ಮಾತ್ರ್ ಕಳ್ತಾ. ಆನಿ ತ್ಯಾ ಕಲೆಚಿ ಗೊವಾಯ್ ಹಿ ಕವಿತಾ. ಎಕೆಕಾ ಉತ್ರಾಂನಿ ಲಿಪೊನ್ ಆಸ್ಚಿ ಗುಂಡಾಯ್ ಪಳೆಯಾ; ಕಾಳೊಕ್ ಮ್ಹಳ್ಯಾಯ್ ಅಗ್ಯಾನ್, ಉಜ್ವಾಡ್ ಪೆಟಂವ್ಚೊ ಆಶಾವಾದ್. ಅಮಾಸೆಚೆ ಕಾಜುಲೆ ಹಾಂಗಾ ಅಮಿಂಚ್ ಸುರ್ಯೆ ಮ್ಹಣುನ್ ಗಾಜಯ್ತಾತ್, ಸಂಸಾರಾಕ್ ತೊಪಿ ದಿಲ್ಲೆಚ್ಚ್ ಪಾಟೊಸಾರ್ ಸೊಭ್ತಾತ್, ಕೊಣಾ ಕೊಣಾಚ್ಯಾ ತೊಂಡಾಕ್ ಚುನೊ/ಕರಿ ಪುಸುನ್ ಹರ್ಧೆಂ ಪೆಟುನ್ ಬಾದೂರ್ ಮ್ಹಣ್ತಾತ್, ಬಾಂಯ್ತ್‌ಲೆ ಮಾಣ್ಕೆ ದರ್ಯಾಂತ್ಲ್ಯಾ ಮಾಸ್ಯಾಂಕ್ ಉಪ್ಯೆಂವ್ಕ್ ಶಿಕಂವ್ಚೆವಿಶಿಂ ಉಲಯ್ತಾತ್, ಪುಣ್ ಕಾಜೂರು ಸತೀಶ್ ತಸಲೆ ಥೊಡೆ ಕವಿ ಮೌನಾಂತ್ ಸರ್ವ್ ಸಾಂಗೊನ್ ವೆತಾತ್.

ವೃತ್ತೆನ್ ಶಿಕ್ಷಕ್ ಜಾವ್ನ್ ವಾವ್ರ್ ಕರ್ಚೊ ಕಾಜೂರು ಸತೀಶ್, ಕಾನಡಿಂತ್ಲೊ ಏಕ್ ಭರ್ವಶ್ಯಾಚೊ ಕವಿ ಮ್ಹಣುನ್ ಪಾಟ್ಲ್ಯಾ ಥೊಡ್ಯಾ ವರ್ಸಾಂನಿ ಕಾನಡಿ ಕವಿತೆಂಚೆರ್ ಅಧ್ಯಯನ್ ಕರ್ತೆಲ್ಯಾಂಕ್ ವಿಚಾರ್ಲೆಂ ತರ್ ಕಳ್ತಾ. ಲೋಕ್ ಉತ್ರಾಂ ಪಳೆವ್ನ್ ಕವಿಕ್ ವಳ್ಕತಾ ಆಸ್ಯೆತ್, ಪುಣ್ ಸಂಸಾರಾಂತ್ ಖರೊ ಕವಿ ಜಾವ್ನಾಸ್ಚೊ ಪಯ್ಲೊ ಏಕ್ ಉಂಚ್ಲೊ ವೆಕ್ತಿ ಜಾವ್ನಾಸ್ತಾ. ಆನಿ ಅಸಲೆಂ ಪ್ರಾಮಾಣಿಕ್ ವೆಕ್ತಿತ್ವ್, ಮನ್ಶಾಗೂಣ್ ಆಸ್ಚೆ ಕವಿ ಕಾಂಯ್ ಬೊಟಾಂನಿ ಮೆಜ್ಯೆತಾ, ಆನಿ ತಾಂತ್ಲೊ ಎಕ್ಲೊ ಮ್ಹಣ್ ಹಾಂವ್ ಹಾಕಾ ಲೆಖ್ತಾಂ. ’ಗಾಯದ ಹೂವುಗಳು’ ಹಾಚೊ ಆಯ್ಲೆವಾರ್ಚೊ ಕವಿತಾಜಮೊ.





ದಿವೊ (ಉಜ್ವಾಡ್) ಪೆಟಯ್ತಾಂ

ಕಾಳೊಕಾ ವಿಶ್ಯಾಂತ್ ಉಲಂವ್ಚೊನಾ
ಉಜ್ವಾಡ್ ಪೆಟಯ್ತಾಂ

ಕಾಡಿ ನಾಂ ತರ್
ಫಾತ್ರಾಂಕ್ ಗಶ್ಟುನ್
ಫಾತೊರ್‌ಚ್ಚ್ ನಾಂತ್ ತರ್
ಆಯ್ದಾಂಕ್ ಗಶ್ಟುನ್

ಆಯ್ದಾಂ ಆಸ್ತೆಲಿಂಚ್ ಸರ್ವ್ ಕಾಳಾಂನಿ.

ಕಾಳೊಕಾ ವಿಶ್ಯಾಂತ್ ಉಲಂವ್ಚೊನಾ
ಉಜ್ವಾಡ್ ಪೆಟಯ್ತಾಂ
ಪೆಟಯ್ತಾಂ ಉಜ್ವಾಡ್
*

ಕಾನಡಿ ಮೂಳ್: ಕಾಜೂರು ಸತೀಶ್


ಕೊಂಕ್ಣೆಕ್: ವಲ್ಲಿ ಕ್ವಾಡ್ರಸ್



ಕಾಜೂರು ಸತೀಶ್: ವೃತ್ತೆನ್ ಶಿಕ್ಷಕ್ ಜಾವ್ನ್ ವಾವ್ರ್ ಕರ್ಚೊ ಕಾಜೂರು ಸತೀಶ್, ಕಾನಡಿಂತ್ಲೊ ಏಕ್ ಭರ್ವಶ್ಯಾಚೊ ಕವಿ ಮ್ಹಣುನ್ ಪಾಟ್ಲ್ಯಾ ಥೊಡ್ಯಾ ವರ್ಸಾಂನಿ ಕಾನಡಿ ಕವಿತೆಂಚೆರ್ ಅಧ್ಯಯನ್ ಕರ್ತೆಲ್ಯಾಂಕ್ ವಿಚಾರ್ಲೆಂ ತರ್ ಕಳ್ತಾ. ಲೋಕ್ ಉತ್ರಾಂ ಪಳೆವ್ನ್ ಕವಿಕ್ ವಳ್ಕತಾ ಆಸ್ಯೆತ್, ಪುಣ್ ಸಂಸಾರಾಂತ್ ಖರೊ ಕವಿ ಜಾವ್ನಾಸ್ಚೊ ಪಯ್ಲೊ ಏಕ್ ಉಂಚ್ಲೊ ವೆಕ್ತಿ ಜಾವ್ನಾಸ್ತಾ. ಆನಿ ಅಸಲೆಂ ಪ್ರಾಮಾಣಿಕ್ ವೆಕ್ತಿತ್ವ್, ಮನ್ಶಾಗೂಣ್ ಆಸ್ಚೆ ಕವಿ ಕಾಂಯ್ ಬೊಟಾಂನಿ ಮೆಜ್ಯೆತಾ, ಆನಿ ತಾಂತ್ಲೊ ಎಕ್ಲೊ ಮ್ಹಣ್ ಹಾಂವ್ ಹಾಕಾ ಲೆಖ್ತಾಂ. ’ಗಾಯದ ಹೂವುಗಳು’ ಹಾಚೊ ಆಯ್ಲೆವಾರ್ಚೊ ಕವಿತಾಜಮೊ.

[अनुवादित कविता] रंगाळ सावळी

भॊव थोड्या उत्रांनि कांय गुंडायेच्या अर्थ्याच्यो सभार काण्यो सांगोन वेचि कला फकत्त एका कविक मात्र कळ्ता. आनि त्या कलेचि गोवाय हि कविता. एकेका उत्रांनि लिपोन आस्चि गुंडाय पळेया; काळोक म्हळ्याय अग्यान, उज्वाड पेटंव्चो आशावाद. अमासेचे काजुले हांगा अमिंच सुर्ये म्हणुन गाजय्तात, संसाराक तोपि दिल्लेच्च पाटोसार सोभ्तात, कोणा कोणाच्या तोंडाक चुनो/करि पुसुन हर्धें पेटुन बादूर म्हण्तात, बांय्त्‌ले माण्के दर्यांत्ल्या मास्यांक उप्येंव्क शिकंव्चेविशिं उलय्तात, पुण काजूरु सतीश तसले थोडे कवि मौनांत सर्व सांगोन वेतात.

वृत्तेन शिक्षक जाव्न वाव्र कर्चो काजूरु सतीश, कानडिंत्लो ऎक भर्वश्याचो कवि म्हणुन पाट्ल्या थोड्या वर्सांनि कानडि कवितेंचेर अध्ययन कर्तेल्यांक विचार्लें तर कळ्ता. लॊक उत्रां पळेव्न कविक वळ्कता आस्येत, पुण संसारांत खरो कवि जाव्नास्चो पय्लो ऎक उंच्लो वेक्ति जाव्नास्ता. आनि असलें प्रामाणिक वेक्तित्व, मन्शागूण आस्चे कवि कांय बोटांनि मेज्येता, आनि तांत्लो एक्लो म्हण हांव हाका लेख्तां. ’गायद हूवुगळु’ हाचो आय्लेवार्चो कविताजमो.
आंकडो ७



उज्वाड पेटय्तां

काळोका विश्यांत उलंव्चोना
उज्वाड पेटय्तां

काडि नां तर
फात्रांक गश्टुन
फातोर्‌च्च नांत तर
आय्दांक गश्टुन

आय्दां आस्तेलिंच सर्व काळांनि.

काळोका विश्यांत उलंव्चोना
उज्वाड पेटय्तां
पेटय्तां उज्वाड
*

कानडि मूळ: काजूरु सतीश

कोंक्णेक: वल्लि क्वाड्रस



काजूरु सतीश: वृत्तेन शिक्षक जाव्न वाव्र कर्चो काजूरु सतीश, कानडिंत्लो ऎक भर्वश्याचो कवि म्हणुन पाट्ल्या थोड्या वर्सांनि कानडि कवितेंचेर अध्ययन कर्तेल्यांक विचार्लें तर कळ्ता. लॊक उत्रां पळेव्न कविक वळ्कता आस्येत, पुण संसारांत खरो कवि जाव्नास्चो पय्लो ऎक उंच्लो वेक्ति जाव्नास्ता. आनि असलें प्रामाणिक वेक्तित्व, मन्शागूण आस्चे कवि कांय बोटांनि मेज्येता, आनि तांत्लो एक्लो म्हण हांव हाका लेख्तां. ’गायद हूवुगळु’ हाचो आय्लेवार्चो कविताजमो.


Saturday, April 2, 2016

ದಿನಚರಿ-20

ತೊಂಬತ್ತರ ದಶಕದಲ್ಲಿ ನಾವೆಲ್ಲ ಶಾಲೆಗೆ ಹೋಗುತ್ತಿದ್ದಾಗ - ಮೊದಲು ಹೋದ ಗೆಳೆಯರು ರಸ್ತೆಯಲ್ಲಿ ಲಕ್ಕಿ ಸೊಪ್ಪನ್ನು ಹಾಕುತ್ತಿದ್ದರು. ಒಂದೊಮ್ಮೆ ಬೇಗ ಹೊರಟರೆ ಆ ಕೆಲಸವನ್ನು ನಾವೇ ಮಾಡುತ್ತಿದ್ದೆವು- ಹೋಗಿದ್ದೇವೆಂಬ ಗುರುತಿಗಾಗಿ.
*
ಈ ಊರಿನಲ್ಲಿ ಈಗೀಗ ಜಾತಿ ಆಧಾರದಲ್ಲಿ ಎರಡು ಬಣಗಳಾಗಿ ಒಂದು ಕಲ್ಲಿನ ನೆಪದಲ್ಲಿ ಜನ ಕಿತ್ತಾಡಿಕೊಳ್ಳುತ್ತಿದ್ದಾರೆ. ಆ ಕಲ್ಲಿನ ಜೊತೆ ತಮಗಿದ್ದ ಸಂಬಂಧವನ್ನು ನನ್ನ ಮಾರ್ಗದರ್ಶಕರೊಬ್ಬರು ಈಚೆಗೆ ಹೇಳಿದ್ದರು.
ಅವರೆಲ್ಲ ಅರವತ್ತರ ದಶಕದಲ್ಲಿ ಶಾಲೆಗೆ ಹೋಗುವಾಗ, ಮೊದಲು ಹೋಗುವ ಗೆಳೆಯರ ಗುಂಪಿನಲ್ಲೊಬ್ಬರು ಎತ್ತರವಾಗಿದ್ದ ಆ ಕಲ್ಲಿನ ಒಂದು ಭಾಗಕ್ಕೆ ಮೂತ್ರ ವಿಸರ್ಜನೆ ಮಾಡುತ್ತಿದ್ದರಂತೆ!

ಆದರೆ, ಅದೇ ಕಲ್ಲಿಗೀಗ ಗುಡಿಯ ಕಟ್ಟಿದ ಜನ ತಮ್ತಮ್ಮ ಲಾಭಾಂಶವನ್ನು ಲೆಕ್ಕ ಹಾಕುತ್ತಿದ್ದಾರೆ, ಕಿತ್ತಾಡಿಕೊಳ್ಳುತ್ತಿದ್ದಾರೆ ಎಂದು ವ್ಯಥೆಪಡುತ್ತಿದ್ದರು.
*
- ಕಾಜೂರು ಸತೀಶ್

Friday, April 1, 2016

ದಿನಚರಿ -19

'ಅಸ್ಪೃಶ್ಯತೆ' ಆ ಊರಿನಲ್ಲಿ ಹೇಗಿತ್ತು ಎನ್ನುವುದನ್ನು ಆ ಊರಿನಿಂದ ಹೊರಗೆ ಜೀವಿಸುತ್ತಿರುವ ಹಿರಿಯರೊಬ್ಬರು ಹೇಳುತ್ತಿದ್ದರು. ಅರವತ್ತು-ಎಪ್ಪತ್ತರ ದಶಕದಲ್ಲಿ ಅವರೊಮ್ಮೆ -ಇಡೀ ನಾಡನ್ನೇ ಹಣ ಮತ್ತು ಅಹಂಕಾರಗಳಿಂದ ತಮ್ಮ ಅಂಕೆಯಲ್ಲಿಟ್ಟುಕೊಂಡಿದ್ದ ವರ್ಗಕ್ಕೆ ಸೇರಿದವನೊಬ್ಬನ ಕಾರನ್ನು ಆಸೆಯಿಂದ ಮುಟ್ಟಿಬಿಟ್ಟರಂತೆ. ಆತ ಆ ಕ್ಷಣವೇ ಕಪಾಳಕ್ಕೆ ಬಾರಿಸಿದನಂತೆ. "ಈ ಕಾರು ಇರೋದು ನಿನ್ನಂತವರಿಗೆ ಮುಟ್ಟಲಿಕ್ಕಲ್ಲ" ಎಂದು ತಾನು ಶಿಕ್ಷೆ ಕೊಟ್ಟದ್ದಕ್ಕೆ ಕಾರಣವನ್ನೂ ಕೊಟ್ಟನಂತೆ! ಈಗಲೂ ಆ ನೋವು ನನ್ನಿಂದ ಮಾಸುತ್ತಿಲ್ಲ ಎನ್ನುತ್ತಿದ್ದರು ಅವರು ಭಾವುಕರಾಗಿ.

ಅನ್ಯ ಭಾಷಿಕರನ್ನೇ ಹೀಗೆ ನಡೆಸಿಕೊಳ್ಳುವ ಆ ಊರು, ಇನ್ನು ಜಾತಿ ವ್ಯವಸ್ಥೆ ಸೃಷ್ಟಿಸಿದ 'ತಳವರ್ಗ'ವನ್ನು ಎಷ್ಟು ಭೀಕರವಾಗಿ ನಡೆಸಿಕೊಂಡಿದ್ದಿರಬಹುದು!
*
ಕಾಜೂರು ಸತೀಶ್