ಆ ವರ್ಷ ಮರದ ತುಂಬಾ ಬೆಣ್ಣೆಹಣ್ಣಿನ 'ಮಿಡಿ'ಗಳು ತುಂಬಿಹೋಗಿದ್ದವು. ಅದು ಹಣ್ಣಾಗುವ, ಅದನ್ನು ಸಕ್ಕರೆಯೊಂದಿಗೆ ಕಲಸಿ ತಿನ್ನುವ ಕನಸು ಕಾಣಲು ತೊಡಗಿ ವರ್ಷಗಳೇ ಬೇಸತ್ತಿದ್ದವು. ಹುಟ್ಟಿ, ಎಂಟು ವರ್ಷ ಬದುಕಿದ್ದೆ ಅಲ್ಲಿ. ಒಂದಿಡೀ ಆಯುಷ್ಯವನ್ನೇ ಸವೆಸಿದ್ದಷ್ಟು ಅನುಭವಗಳನ್ನು ತುಂಬಿಕೊಟ್ಟಿದ್ದವು ಆ ದಿನಗಳು.
ಮಳೆಗಾಲ. ತುಂಬಾ ಮಳೆಯಾಗುವ ಊರು ಅದು. ಮನೆಯ ಎಲ್ಲ ಸಾಮಾನುಗಳನ್ನೂ ಲಾರಿಗೆ ತುಂಬಿದ್ದೆವು. ಮನೆ ಬಿಡುವ ಕಡೆಯ ಕ್ಷಣದಲ್ಲಿ ಬೆಣ್ಣೆಹಣ್ಣಿನ ಮರವನ್ನೊಮ್ಮೆ ನೋಡಿದೆ- ಬಲಿಯಲು ಇನ್ನೊಂದು ತಿಂಗಳಷ್ಟೇ ಸಾಕಿತ್ತು. ನೆಲ ಕಳೆದುಕೊಂಡ ದುಃಖಕ್ಕಿಂತ ಕನಿಷ್ಟ ಒಂದು ಹಣ್ಣನ್ನಾದರೂ ತಿನ್ನಲಾಗಲಿಲ್ಲವಲ್ಲ ಎಂಬುದೇ ಆಗಿನ ನನ್ನ ಸಂಕಟದ ವಿಷಯವಾಗಿತ್ತು!
*
ಕಾಜೂರು ಸತೀಶ್
ಅಜ್ಞಾನಿಯ ದಿನಚರಿ
ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್
Thursday, March 24, 2016
ದಿನಚರಿ -18
Subscribe to:
Post Comments (Atom)
-
ಬಾಳೆಯಡ ಕಿಶನ್ ಪೂವಯ್ಯ ಅವರನ್ನು ಭೇಟಿ ಮಾಡಿಸಿದ್ದು ಮಡಿಕೇರಿಯಲ್ಲಿ ನಡೆದ ಅಖಿಲ ಭಾರತ ೮೦ನೆಯ ಸಾಹಿತ್ಯ ಸಮ್ಮೇಳನ.ಅವರು ಸ್ವಾಗತ ಸಮಿತಿಯ ಸಂಚಾಲಕರಾಗಿದ್ದಾಗ ಅದೇ ತಂಡದಲ್...
-
ಹೆಂಡತಿ ತೀರಿಕೊಂಡ ದಿನ ಬೆಳ್ಳಂಬೆಳಿಗ್ಗೆಯೇ ಅವಳು ಕರೆಮಾಡಿದಳು 'ಯಾವಾಗ ಬರ್ತೀಯ?' 'ಬೆಳಿಗ್ಗೆ'- ಅವನೆಂದ. ಮುಖ ತೊಳೆದು ಇಸ್ತ್ರಿ ಮಾಡಿದ ಬಟ್ಟೆ ಹಾಕ್...
No comments:
Post a Comment