ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Monday, February 1, 2016

ಮತ್ತೆ ಮತ್ತೆ ಕಾಡುವ ಊರ್ಮಿಳೆ

ಗೆಳೆಯ ಅನಿಲ್ ಕುಮಾರ್ ಹೊಸೂರು ಅವರ ಮತ್ತೆ ಮತ್ತೆ ಊರ್ಮಿಳೆ ಕವನ ಸಂಕಲನವನ್ನು ಓದಿದ ಮೇಲೆ ಅನಿಸಿದ್ದು.. ಮೂರ್ನಾಲ್ಕು ವರ್ಷಗಳಿಂದೀಚೆಗೆ ಬರವಣಿಗೆಯಲ್ಲಿ ತೊಡಗಿಕೊಂಡಿದ್ದರೂ, ಕವಿತೆಗಳು ಪ್ರಬುದ್ಧವಾಗಿವೆ. ಸಾಕ್ಷಿಗೆ ಈ ಸಾಲುಗಳನ್ನೇ ನಿಮ್ಮ ಮುಂದಿರಿಸುತ್ತಿದ್ದೇನೆ:

ಜೋರು ಗಾಳಿಯ ಒಳಗೆ ಸುಳಿದ ಹಂಸಗೀತೆ[ಸಾವು]
*

ಅಂಗೈ ಕಿನಾರೆಯ ಅಸ್ಪಷ್ಟ ರೂಹುಗಳಲಿ
ಹರಿದುಬಿಡಬಲ್ಲವು ನದಿಗಳು ಅರಿವಿಲ್ಲದೇ[ಈ ಕಡಲು]
*

**ಇಲ್ಲಿನ್ನೂ ಮಳೆಯಾಗಿಲ್ಲ
ಕೊನೆಯ ಉಸಿರು
ಆವಿಯಾಗುತ್ತಿದೆ[ಮುಖವಾಡ ಕಳಚಿದಾಗ]*
*

ದೀರ್ಘ ಇರುಳೊಂದು ಮೈಮುರಿದು
ಮುಂಜಾವು ಆಕಳಿಸುವಷ್ಟರಲ್ಲಿ
ಜೋರು ಮಳೆ ಶುರುವಾಗಿತ್ತು[ಒಂದು ಮಳೆ ಚಿತ್ರಣ]
*

ನಮ್ಮ ಕೊಠಡಿಯಲ್ಲಿ
ಕನ್ನಡಿಯಿಲ್ಲ
ಪರಸ್ಪರ
ಕಣ್ಣಿಗಳಿಗಿಳಿದು
ನೋಡಿಕೊಳ್ಳುತ್ತೇವೆ

ಪ್ರತಿ ಉಚ್ವಾಸ ನೀನು
ನಿಶ್ವಾಸ
ಈ ಕವಿತೆ[ಒಂದು ಕನ್ನಡಿಯ ಸುತ್ತ]
*

ಜಿಗಿದ ಕಪ್ಪೆ
ಕೊಳದೊಳಗೆ
ಅಲೆ -ಅಲೆ
ಅಲೆತ
ತೀರಕ್ಕೆ
ತೀರದ
ರೋಮಾಂಚನ

ಚಿಟ್ಟೆ
ರೆಕ್ಕೆ ಬಿಚ್ಚಿತು
ದಿಗಂತದಲಿ
ಹಬ್ಬುತಿದೆ
ಮಳೆಬಿಲ್ಲು

ಶಕುಂತಳೆಯಿನ್ನೂ
ಉಂಗುರ
ಹುಡುಕುತ್ತಿದ್ದಾಳೆ
ದುಶ್ಯಂತ
ಕಲಕಿದ ಕೊಳದಲ್ಲಿ[ಒಂದಷ್ಟು ಮುತ್ತಿನ ಕವಿತೆಗಳು]

*
ಅಭಿನಂದನೆಗಳು ಅನಿಲ್ ಕುಮಾರ್ ಹೊಸೂರು ಅವರಿಗೆ .
*

ಕಾಜೂರು ಸತೀಶ್


No comments:

Post a Comment