ಗೆಳೆಯ ಅನಿಲ್ ಕುಮಾರ್ ಹೊಸೂರು ಅವರ ಮತ್ತೆ ಮತ್ತೆ ಊರ್ಮಿಳೆ ಕವನ ಸಂಕಲನವನ್ನು ಓದಿದ ಮೇಲೆ ಅನಿಸಿದ್ದು.. ಮೂರ್ನಾಲ್ಕು ವರ್ಷಗಳಿಂದೀಚೆಗೆ ಬರವಣಿಗೆಯಲ್ಲಿ ತೊಡಗಿಕೊಂಡಿದ್ದರೂ, ಕವಿತೆಗಳು ಪ್ರಬುದ್ಧವಾಗಿವೆ. ಸಾಕ್ಷಿಗೆ ಈ ಸಾಲುಗಳನ್ನೇ ನಿಮ್ಮ ಮುಂದಿರಿಸುತ್ತಿದ್ದೇನೆ:
ಜೋರು ಗಾಳಿಯ ಒಳಗೆ ಸುಳಿದ ಹಂಸಗೀತೆ[ಸಾವು]
*
ಅಂಗೈ ಕಿನಾರೆಯ ಅಸ್ಪಷ್ಟ ರೂಹುಗಳಲಿ
ಹರಿದುಬಿಡಬಲ್ಲವು ನದಿಗಳು ಅರಿವಿಲ್ಲದೇ[ಈ ಕಡಲು]
*
**ಇಲ್ಲಿನ್ನೂ ಮಳೆಯಾಗಿಲ್ಲ
ಕೊನೆಯ ಉಸಿರು
ಆವಿಯಾಗುತ್ತಿದೆ[ಮುಖವಾಡ ಕಳಚಿದಾಗ]*
*
ದೀರ್ಘ ಇರುಳೊಂದು ಮೈಮುರಿದು
ಮುಂಜಾವು ಆಕಳಿಸುವಷ್ಟರಲ್ಲಿ
ಜೋರು ಮಳೆ ಶುರುವಾಗಿತ್ತು[ಒಂದು ಮಳೆ ಚಿತ್ರಣ]
*
ನಮ್ಮ ಕೊಠಡಿಯಲ್ಲಿ
ಕನ್ನಡಿಯಿಲ್ಲ
ಪರಸ್ಪರ
ಕಣ್ಣಿಗಳಿಗಿಳಿದು
ನೋಡಿಕೊಳ್ಳುತ್ತೇವೆ
ಪ್ರತಿ ಉಚ್ವಾಸ ನೀನು
ನಿಶ್ವಾಸ
ಈ ಕವಿತೆ[ಒಂದು ಕನ್ನಡಿಯ ಸುತ್ತ]
*
ಜಿಗಿದ ಕಪ್ಪೆ
ಕೊಳದೊಳಗೆ
ಅಲೆ -ಅಲೆ
ಅಲೆತ
ತೀರಕ್ಕೆ
ತೀರದ
ರೋಮಾಂಚನ
ಚಿಟ್ಟೆ
ರೆಕ್ಕೆ ಬಿಚ್ಚಿತು
ದಿಗಂತದಲಿ
ಹಬ್ಬುತಿದೆ
ಮಳೆಬಿಲ್ಲು
ಶಕುಂತಳೆಯಿನ್ನೂ
ಉಂಗುರ
ಹುಡುಕುತ್ತಿದ್ದಾಳೆ
ದುಶ್ಯಂತ
ಕಲಕಿದ ಕೊಳದಲ್ಲಿ[ಒಂದಷ್ಟು ಮುತ್ತಿನ ಕವಿತೆಗಳು]
*
ಅಭಿನಂದನೆಗಳು ಅನಿಲ್ ಕುಮಾರ್ ಹೊಸೂರು ಅವರಿಗೆ .
*
ಕಾಜೂರು ಸತೀಶ್
ಅಜ್ಞಾನಿಯ ದಿನಚರಿ
ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್
Monday, February 1, 2016
ಮತ್ತೆ ಮತ್ತೆ ಕಾಡುವ ಊರ್ಮಿಳೆ
Subscribe to:
Post Comments (Atom)
-
ಬಾಳೆಯಡ ಕಿಶನ್ ಪೂವಯ್ಯ ಅವರನ್ನು ಭೇಟಿ ಮಾಡಿಸಿದ್ದು ಮಡಿಕೇರಿಯಲ್ಲಿ ನಡೆದ ಅಖಿಲ ಭಾರತ ೮೦ನೆಯ ಸಾಹಿತ್ಯ ಸಮ್ಮೇಳನ.ಅವರು ಸ್ವಾಗತ ಸಮಿತಿಯ ಸಂಚಾಲಕರಾಗಿದ್ದಾಗ ಅದೇ ತಂಡದಲ್...
-
ಹೆಂಡತಿ ತೀರಿಕೊಂಡ ದಿನ ಬೆಳ್ಳಂಬೆಳಿಗ್ಗೆಯೇ ಅವಳು ಕರೆಮಾಡಿದಳು 'ಯಾವಾಗ ಬರ್ತೀಯ?' 'ಬೆಳಿಗ್ಗೆ'- ಅವನೆಂದ. ಮುಖ ತೊಳೆದು ಇಸ್ತ್ರಿ ಮಾಡಿದ ಬಟ್ಟೆ ಹಾಕ್...
No comments:
Post a Comment