ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Tuesday, December 1, 2015

ಗಾಯದ ಹೂವುಗಳ ಕುರಿತು ಎಂ. ಎಸ್. ರುದ್ರೇಶ್ವರಸ್ವಾಮಿ ಅವರ ಮಾತು

ಸಂಕೋಚ ಸ್ವಭಾವದ ಕವಿ ಕಾಜೂರು ಸತೀಶ್,
ಮಡಿಕೇರಿಯ ಎತ್ತರದ ಮರಗಳಲ್ಲಿನ ಮಿಣುಕು ಹುಳುಗಳನ್ನ
ಅವುಗಳ ಮಿಂಚನ್ನ
ಕವಿತೆಯೊಳಗೆ ಕರೆತರುವಾಗಲೂ
ಅವುಗಳಿಗೆ ಗಾಯವಾದೀತೆಂಬ ಅಳುಕುಳ್ಳವರು.
ಯಾವಾಗಲೂ ಒಂದು ಒಳ್ಳೆಯ ಕವಿತೆಗಾಗಿ ಕಾಯುವ ಸತೀಶ್
ಏನಾಯ್ತು, ಎಂದು ಕೇಳಿದರೆ.
ಏನಿಲ್ಲ, ಕವಿತೆ ತುಂಬಾ ಅವಸರದಲ್ಲಿತ್ತು
ಅದರ ಜೊತೆ ಹೆಜ್ಜೆ ಹಾಕಲಾಗಲಿಲ್ಲ
ಎಂದು ಹೇಳುವ Sense
And Sensibility ಯುಳ್ಳವರು.
ಈ ಸಂಕಲನದ ಹಸ್ತಪ್ರತಿಗೆ ೨೦೧೫ರ ಕಡೆಂಗೋಡ್ಲು ಶಂಕರಭಟ್ಟ ಕಾವ್ಯ ಪುರಸ್ಕಾರ
ದೊರೆತಿದೆ. ಇದು ಸತೀಶ್ ಅವರ ಮೊದಲ ಸಂಕಲನ ಕೂಡ.

೦೧.೧೨.೨೦೧೫
**

-ಎಂ.ಎಸ್. ರುದ್ರೇಶ್ವರಸ್ವಾಮಿ

No comments:

Post a Comment