ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Monday, November 23, 2015

'ಗಾಯದ ಹೂವುಗಳು' ಕುರಿತು ಬಸೂ ಅವರ ಮಾತು

ಗೆಳೆಯ ಕಾಜೂರು ಸತೀಶ್ ರ 'ಗಾಯದ ಹೂಗಳು' ಕವನ ಸಂಕಲನ ಇಂದು ತಲುಪಿತು. ಸಂಕಲನದ ಹೆಸರೇ ನನ್ನೊಳಗೊಂದು ತಲ್ಲಣ ಹುಟ್ಟಿಸಿದೆ. ಸಂಕಲನವನ್ನು ಮುಟ್ಟುವಾಗ ಬೆರಳು ಸುಮ್ಮನೆ ಕಂಪಿಸುತ್ತಿದ್ದವು. ಎದೆಯೊಳಗೆ ಯಾವುದೊ ಸಂಕಟ ಎದ್ದುಬಂದ ಹಾಗೆ ತಳಮಳ. ಅದು ತುಂಬ ಆಳಕ್ಕಿಳಿಯಿತು. ಒಂದೆರಡು ಕವಿತೆಗಳನ್ನಷ್ಟೆ ಓದಲು ಸಾಧ್ಯವಾಗಿದೆ. ಕಣ್ಮುಚ್ಚಿ ಧ್ಯಾನಸ್ಥವಾಗುವ ಮನಸು ಓದು ಮುಂದುವರೆಸಲು ಒಪ್ಪುತ್ತಿಲ್ಲ.



ಸತೀಶ್ ನಮ್ಮ ನಡುವಿನ ತುಂಬ ಭರವಸೆಯ ಯುವಕವಿ. ಎಫ್ ಬಿ ಮೂಲಕವೆ ಪರಿಚಯವಾದ ಅವರ ಸಾಲು ಎಷ್ಷು ತಾಕಿದ್ದವು ಎಂದರೆ ಕಳೆದ ಸಲ ಹಾವೇರಿಯಲ್ಲಿ ನಾವು ಸಂಘಟಿಸಿದ ಮೇ ಸಾಹಿತ್ಯ ಮೇಳದಲ್ಲಿ ಕವಿತೆ ಓದಲು ಅವರನ್ನು ಕರೆಯಿಸಿಕೊಂಡಿದ್ದೆ. ಮೌನವಾಗಿ ಗಾಢವಿಷಾಧವನ್ನು ಗುಲ್ಜಾರರಷ್ಟೆ ಅವರು ಕನ್ನಡದಲ್ಲಿ ಸಶಕ್ತವಾಗಿ ಕಟ್ಟಿಕೊಡಬಲ್ಲರು.


ಈ ರಾತ್ರಿಗೆ ನಾನು ಅವರ ಗಾಯದ ಹೂಗಳೊಂದಿಗಿರುವೆ. ಗಾಯಗೊಳಿಸದೆ ಕವಿತೆ ಓದಿಸಲು ಅವರಿಗೆ ಬರುವುದಿಲ್ಲ. ಹಿಂಸೆ ಮತ್ತು ಉನ್ಮಾದದ ಉತ್ಪಾದನೆಯಲ್ಲಿ ರಾಜ್ಯದ ಕೆಲ ಶಕ್ತಿಗಳು
ಮುಳುಗಿರುವ ಸಮಯದಲ್ಲಿ ಈ ಕವಿ ತಾನು ಗಾಯಗೊಂಡು ಲೋಕವನ್ನು ಮಾನವೀಯವಾಗಿಸಲು ಅಕ್ಷರಗಳನ್ನು ಒಳಗಿಳಿಸಿಕೊಂಡಿದ್ದಾರೆ. ಈ ಕವಿಗೊಂದು ಶರಣು.
*

-ಬಸೂ

No comments:

Post a Comment