ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Saturday, November 21, 2015

'ಗಾಯದ ಹೂವುಗಳು' ಕುರಿತು ಟಿ.ಕೆ.ತ್ಯಾಗರಾಜ್ ಅವರ ಅನಿಸಿಕೆ

ನನ್ನ ಜಿಲ್ಲೆಯ ಪ್ರೀತಿಯ ಗೆಳೆಯ,ಪ್ರತಿಭಾವಂತ ಕವಿ ಕಾಜೂರು ಸತೀಶ್ ತಮ್ಮ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಪಡೆದ "ಗಾಯದ ಹೂವುಗಳು" ಕವನ ಸಂಕಲನವನ್ನು ನೆನಪಿಟ್ಟು ಕಳಿಸಿಕೊಟ್ಟಿದ್ದಾರೆ.ಸುಂದರವಾದ ಮುಖಪುಟವಷ್ಟೇ ಅಲ್ಲ.ನಿಮ್ಮೆದೆಯ ಕದ ತಟ್ಟ ಬಲ್ಲ ಕವನಗಳ ಬುತ್ತಿಯನ್ನೇ ಕಟ್ಟಿ ಕೊಟ್ಟಿದ್ದಾರೆ.


"ನೀನು ನನ್ನ ಜತೆ ಬದುಕಿಕೊಳ್ಳಬಹುದು" ಎಂಬ ಕವನದಲ್ಲಿ ಅವರು ಹೇಳುತ್ತಾರೆ :


ನನ್ನ ಪಕ್ಕೆಲುಬುಗಳನ್ನು ಕಿತ್ತು
ಪಂಜರವಾಗಿಸುತ್ತೇನೆ
ನೀನದರ ಹೊರಗೆ ಹಾರಾಡಿಕೊಂಡಿರಬಹುದು.
.......
.......
ನನ್ನ ಕಣ್ಣ ಕೆಂಪನ್ನು ಬಸಿದು
ಹೂವೊಂದನ್ನು ಸೃಷ್ಟಿಸುತ್ತೇನೆ
ನೀನದನ್ನು ಮುಡಿಗೇರಿಸಿಕೊಳ್ಳಬಹುದು.

ಇನ್ನೊಂದು ಪದ್ಯ "ಇನ್ನೂ ಬದುಕಿರುವ ಕವಿತೆಗಳು" ವಿನಲ್ಲಿ ಅವರು ಹೇಳುತ್ತಾರೆ :
ಜೀವ ಚಡಪಡಿಸುವ ಹೊತ್ತಲ್ಲಿ
ವೈದ್ಯರ ಬಳಿ ಹೋದೆ
ಹರಿದ ನನ್ನ ಜೇಬು ತಡಕಾಡಿದರು.
ಹೊರ ಬರುವ ಹೊತ್ತಲ್ಲಿ
ಜೇಬಿನ ತುತ್ತ ತುದಿಯ ದಾರಕ್ಕೆ
ಪದ್ಯಗಳು ಜೋತು ಬಿದ್ದಿದ್ದವು.
ಅದರ ಬಲದಲ್ಲಿ
ನಾನೀಗಲೂ ಬದುಕಿಕೊಂಡಿದ್ದೇನೆ.
...........
ಅವರ ಕಾವ್ಯ ಪ್ರತಿಭೆಗೆ ಎರಡು ಉದಾಹರಣೆಗಳನ್ನಷ್ಟೇ ನಾನು ನಿಮ್ಮ ಮುಂದಿರಿಸಿದ್ದೇನೆ. ಬೆಂಗಳೂರಿನ ಫಲ್ಗುಣಿ ಪುಸ್ತಕ ಈ ಸಂಕಲನವನ್ನು ಪ್ರಕಟಿಸಿದೆ.ಹೊಸ ತಲೆಮಾರಿನ ಸಂವೇದನೆ ನಿಮಗೂ ಇಷ್ಟವಾಗುತ್ತದೆ.
**

ಟಿ.ಕೆ.ತ್ಯಾಗರಾಜ್

1 comment: