ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Tuesday, March 31, 2015

ಕಿಗ್ಗಾಲು ಗಿರೀಶ್ ಅವರ 'ಮಿತ್ರಲೋಕ'ದ ಕುರಿತು..

ನಿವೃತ್ತ ವಾಯುಪಡೆಯ ಅಧಿಕಾರಿ ಕಿಗ್ಗಾಲು ಎಸ್ ಗಿರೀಶ್ ಅವರು ಕೃಷಿಯಲ್ಲಿ ಸಕ್ರಿಯರಾಗಿದ್ದುಕೊಂಡು,ಅದನ್ನು ಸಾಹಿತ್ಯಕ್ಕೂ ವಿಸ್ತರಿಸಿಕೊಂಡವರು.'ನಗೆಹೋಳಿಗೆ' ,'ಹವಾಲ್ದಾರ್ ಮಂಜಪ್ಪ ಮತ್ತಿತರ ಕಥೆಗಳು ' ಕೃತಿಗಳ ಮೂಲಕ ಕೊಡಗು ಜಿಲ್ಲೆಯ ಸಾಹಿತ್ಯ ವಲಯದಲ್ಲಿ ಹೆಸರು ಗಳಿಸಿದವರು.

ಪ್ರಸ್ತುತ 'ಮಿತ್ರಲೋಕ'ದಲ್ಲಿರುವ
೬೫ ಚತುಷ್ಪದಿಗಳನ್ನು ಛಂದೋಬದ್ಧವಾಗಿ ರಚಿಸಿದ್ದಾರೆ.ಈ ಉಸಿರುಗಟ್ಟಿಸುವ ಕಾಲದಲ್ಲೂ ಮತ್ತೆ
ನವೋದಯದ ಭಾಷೆಯನ್ನೂ ,ಅಭಿವ್ಯಕ್ತಿಯ ಕ್ರಮವನ್ನೂ ರೂಢಿಸಿಕೊಂಡು , ಸಹಜ-ಸರಳ ಮಾದರಿಯಲ್ಲಿ
ಲೋಕದ ವೈರುಧ್ಯಗಳನ್ನು ಕಟ್ಟಿಕೊಟ್ಟು ಚಿಂತನೆಗೆ ಹಚ್ಚಿದ್ದಾರೆ .ಜೊತೆಜೊತೆಗೆ ಜಗತ್ತು
ನಿರ್ವಹಿಸಬೇಕಾದ ತುರ್ತನ್ನೂ,ಪಾಲಿಸಬೇಕಾದ ಮಾರ್ಗವನ್ನೂ
ಹಾಕಿಕೊಟ್ಟಿದ್ದಾರೆ.ಹಳೆ-ನಡು-ಹೊಸಗನ್ನಡದ ಬಳಕೆಯಿದ್ದರೂ,ಒಟ್ಟು ಓದಿನ ನಂತರ 'ಸಮನ್ವಯ'ದ
ಅನುಭವವೊಂದು ಓದುಗನಲ್ಲಿ ಮೂಡುತ್ತದೆ . ೬೫ ಚತುಷ್ಪದಿಗಳಲ್ಲೂ ಹಚ್ಚಿಟ್ಟ ದೀಪದ ಬೆಳಕಿದೆ.


ಹರಿವ ನೀರಿಗೆ ಉಂಟೆ ಜಾತಿಮತಪಂಥ?
ಉರಿವ ಅಗ್ನಿಗೆ ಉಂಟೆ ಕುಲಗೋತ್ರ ಧರ್ಮ?
ಇರಲೇಕೆ ಮನುಜಂಗೆ ಮತ್ತೆ ವರ್ಣ ಸಂಘರ್ಷ?
ತೊರೆದುಬಿಡು ಮರುಳುತನ ಕೇಳುಮಿತ್ರ

ಇಂತಹ ಮಾದರಿಯ ಚತುಷ್ಪದಿಗಳ ಜೊತೆಗೆ ಅವುಗಳ ವ್ಯಾಖ್ಯಾನವನ್ನೂ ಕೃತಿ ಒಳಗೊಂಡಿದೆ.

ಕಿಗ್ಗಾಲು ಗಿರೀಶ್ ಅವರ ಬರೆಹಗಳು ಸಹೃದಯರನ್ನು ತಲುಪಲಿ;ಮತ್ತಷ್ಟೂ ಗಂಭೀರತೆಯನ್ನು ಸಾಧಿಸಲಿ.
**
-ಕಾಜೂರು ಸತೀಶ್

No comments:

Post a Comment