ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Wednesday, February 11, 2015

ನನ್ನ ಶವಪೆಟ್ಟಿಗೆ ಹೊರುವವರಿಗೆ

ನನ್ನ ಶವಪೆಟ್ಟಿಗೆ ಹೊರುವವರಿಗೆ
ಉಯಿಲಿನಲ್ಲೂ ಬರೆದಿಡಲಾಗದ
 ರಹಸ್ಯವೊಂದು  ಹೇಳಲು ಉಳಿದಿದೆ.
ನನ್ನ ಹೃದಯದ ಜಾಗದಲ್ಲೊಂದು ಹೂವಿರುತ್ತದೆ ;
ಏರು ಯೌವ್ವನದಲ್ಲಿ
ಪ್ರೀತಿಯ ಆತ್ಮತತ್ವ ಹೇಳಿಕೊಟ್ಠವಳ ಪೂಜಾದ್ರವ್ಯ.



ಮಣ್ಣುಮುಚ್ಚುವ ಮುಂಚೆ
ಹೃದಯದಿಂದ ಆ ಹೂ ಕಿತ್ತು
ಎಸಳುಗಳಿಂದ ಮುಖವ ಮುಚ್ಚಿಡಬೇಕು.
ರೇಖೆಗಳೇ ಮಾಸಿದ ಹಸ್ತಗಳಲ್ಲೂ ಒಂದೊಂದು ದಳ. 
ಹಿಂತಿರುಗಿ ಹೋಗಬೇಕು ಹೂವಿನೊಂದಿಗೆ,
ಹಿಂತಿರುಗಿ ಹೋಗಬೇಕು .



ಇನ್ನೇನು ಸಾಯಬೇಕು ಎನ್ನುವಾಗ
ಈ ಸತ್ಯ ಹೇಳಲು ಸಮಯವಿರುವುದಿಲ್ಲ.
ಬಾಯಿಗೆ ಸುರಿಯುವ ನೀರು
ಸಾವಿನತ್ತ ಹರಿಯುತ್ತದೆ 

ಇಲ್ಲದಿದ್ದರೆ
ನನ್ನ ಶವಪೆಟ್ಟಿಗೆಯನ್ನು ಮುಚ್ಚಬೇಡಿರಿ
ಮುಚ್ಚಬೇಡಿರಿ ನನ್ನ ಶವಪೆಟ್ಟಿಗೆಯನ್ನು



ಇನ್ನು ನನ್ನ ಸ್ನೇಹಿತರೂ ತೀರಿಕೊಂಡವರಲ್ಲವೇ?


**





ಮಲಯಾಳಂ ಮೂಲ- ಎ. ಅಯ್ಯಪ್ಪನ್


ಕನ್ನಡಕ್ಕೆ -ಕಾಜೂರು ಸತೀಶ್

No comments:

Post a Comment