ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Saturday, January 31, 2015

ಎಲ್ಲ ಅಳಿದ ಮೇಲೆ

ಎಲ್ಲ ಅಳಿದ ಮೇಲೆ
ಉಳಿದ ಅಷ್ಟೋ ಇಷ್ಟೋ
ಗುಳಿಬಿದ್ದ ಕಣ್ಣ ಕನಸ್ಸುಗಳು
ಗುಳೆ ಹೊರಡುವವು ನಾಳೆಗಳ ಹುಡುಕಿ.



ನೆತ್ತಿಗೆ ಸೂರಾಗಿದ್ದ ಎಲೆಯನ್ನೂ ಬಿಡದೆ
ಉರುಳಿಸಿ ಸಪಾಟು ಮಾಡಿರುವಂಥ ಕಾಲ
ಸೂರ್ಯ ಈಜಾಡಿಕೊಂಡಿರುವ ನೆಲ
ನಡೆದಾಡುವ ಬೋಳುಪಾದಗಳ ಬೊಬ್ಬೆಗಳ ಲೆಕ್ಕ
ಪಾದದಡಿಯ ಮಣ್ಣಿಗಷ್ಟೇ ಗೊತ್ತು,




ರಾತ್ರಿ ಎದುರು ಬಂದು
ತಡೆದು ನಿಲ್ಲಿಸಿದಾಗ
ಅದರ ಕಪ್ಪು ಕಂಬಳಿಯಲ್ಲಿ
ಮುಸುಕು ಹೊದ್ದು ನಿದ್ದೆ.
ಕಣ್ಣ-ಬೆನ್ನ-ತಲೆಯ ಮೇಲಿನ ಕನಸ್ಸು
ಭೂಮಿಗೆ.




ಪ್ರತಿ ರಾತ್ರಿ ಮೂಟೆಗಟ್ಟಿದ ಕನಸ
ಮೊಗೆಮೊಗೆದು ಮುಕ್ಕಿದರೂ
ಪುಟ್ಟ ಪಾದಗಳು ಕಚಗುಳಿಯಿಟ್ಟರೂ
ನೆಲವ್ಯಾಕೆ ಇನ್ನೂ ಚಿಗುರುತ್ತಿಲ್ಲ?




ಎಲ್ಲ ಅಳಿದರೂ
ಬಟಾಬಯಲಿನಲ್ಲೊಂದು
ಮರವಾದರೂ ಇರಬೇಕಿತ್ತು
ಬಕಾಸುರ ಸೂರ್ಯನ ಆಹಾರ ಬದಲಿಸಬಹುದಿತ್ತು.

**

-ಕಾಜೂರು ಸತೀಶ್

ಮರಣದ ನಂತರ

ಆ ರಾತ್ರಿ ಕನಸ್ಸು ಬಿದ್ದಂತೆ
ಅಷ್ಟು ಒತ್ತೊತ್ತಾಗಿ ಇಬ್ಬರೂ ಮಲಗಲು
ನಿಜಕ್ಕೂ ಸಾಧ್ಯವಿರಲಿಲ್ಲ .




ಎಷ್ಟೆಂದರೆ,
ನಡುವೆ ಒಂದು ನೂಲನ್ನೂ ಒಳಗಿಳಿಸಲಾಗದ್ದಷ್ಟು.
ಅಷ್ಟು ಅಪ್ಪಿಕೊಂಡು,
ಅಷ್ಟು ಅಂಟಿಕೊಂಡು .




ಎಚ್ಚರವಾದಾಗ,
ಅದು ಕನಸ್ಸೆಂದು ತಿಳಿದಿದ್ದರೂ ,
ಖುಷಿಯೋ ಖುಷಿ
ಬಿರಿಯುವ ನಗು
ಪುಟಿಯುವ ಉತ್ಸಾಹ
ಉಕ್ಕುವ ಉನ್ಮಾದ .




ಮರುದಿನ ಅವನು ಹೇಳಿದ-
'ನಮ್ಮಿಬ್ಬರಿಗೂ ಸ್ಮಶಾನದಲ್ಲಿ
ಜಾಗ ಬುಕ್ ಮಾಡಿಸಿ ಬಂದಿದ್ದೇನೆ '.




ಒಳಗೆ ಸೇರಿದ ಕಳ್ಳು
ಹಾಗೆ ಹೇಳಿಸಿತ್ತು.




ಆದರೂ,
'ಆಯ್ತು ' ಎಂದೆ.





ಹೇಗೋ ಮುದುರಿಕೊಂಡು
ಅಂಟಿಕೊಂಡು ಮಲಗಿಬಿಡಬಹುದು-
ಸ್ವಲ್ಪ ಜಾಗ ಸಿಕ್ಕರಷ್ಟೇ ಸಾಕು .




ಸತ್ತ ಮೇಲೆ ,
ಮಣ್ಣಿನೊಳಗೆ
ಒಟ್ಟೊಟ್ಟಿಗೆ ಚಟ್ಟದಲ್ಲಿದ್ದಾಗ ಮಾತ್ರ
ನಮ್ಮಿಬ್ಬರಿಗೆ ರತಿಸುಖ ಸಿಗುವುದು .


ಅಷ್ಟೇ ಸಾಕು.

**

ಮಲಯಾಳಂ ಮೂಲ- ದೇವಸೇನ

ಕನ್ನಡಕ್ಕೆ -ಕಾಜೂರು ಸತೀಶ್

Thursday, January 22, 2015

ಭಯ

ಚಿಕ್ಕವನಿದ್ದಾಗ
ಗೂಬೆ ಕೂಗುವ ದನಿ ಕೇಳಿದಾಗಲೆಲ್ಲ
ಹೆದರಿ ಅಮ್ಮನ ಸೀರೆಯ ಸೆರಗಿನ ಹಿಂದೆ
ಅಡಗಿಕೊಳ್ಳುತ್ತಿದ್ದೆ.



ಈಗ
ಥರಗುಟ್ಟುವ ಮಾಗಿಯ ಚಂದ್ರ
ಮೋಡಗಳ ನಡುವೆ ಕುಳಿತು ಊಳಿಡುತ್ತಿದೆ.







ಸಾವಿನ ಹಿಂದೆ
ಅಡಗಿಕೊಂಡ ಅಮ್ಮ
ಬಾಲ್ಯದ ಮೋಡಗಳ ಹಿಂದೆ
ಅಡಗಿ ಇಣುಕುತ್ತಿದ್ದಾಳೆ.
ಚಂದ್ರನ ಕಣ್ಣಿನ ಮಾಗಿದ ಬೆಳಕು
ಅವಳ ಮೇಲೆ .



ನನಗೀಗ ಸಾವಿನ ಭಯವಿಲ್ಲ .

**

ಮಲಯಾಳಂ ಮೂಲ- ಕೆ.ಸಚ್ಚಿದಾನಂದನ್


ಕನ್ನಡಕ್ಕೆ -ಕಾಜೂರು ಸತೀಶ್

Saturday, January 17, 2015

ಆ ಹಕ್ಕಿ

ಮತ್ತೆ ಅಂಥದ್ದೇ ಹಕ್ಕಿ ನನ್ನನ್ನು ಕಾಡಿಸಬೇಕು ಎಂಬಂತೆ ಸತ್ತು ಬಿದ್ದಿತ್ತು !



ಒಂದು ದಿನ ಶೂನ್ಯವನ್ನು ದಿಟ್ಟಿಸಿ ಅದರೊಳಗಿರಬಹುದಾದ ಕೇಂದ್ರ , ವ್ಯಾಸ, ತ್ರಿಜ್ಯ ,ಜ್ಯಾ,ವೃತ್ತಖಂಡ,ತ್ರಿಜ್ಯಾಂತರಖಂಡಗಳನ್ನೆಲ್ಲ ಊಹಿಸಿ , ಜ್ಯಾಮಿತಿಯ ಒಳಗೂ ಇರುವ aesthetic senseನ್ನು ಅನುಭವಿಸುತ್ತಾ ಕುಳಿತಿದ್ದಾಗ, ಆ ಹಕ್ಕಿ ಹಾರಿಬಂದು ನೆಟ್ಟಗೆ ನೆಟ್ಟಿದ್ದ ಕಂಬವೊಂದಕ್ಕೆ ಢಿಕ್ಕಿಯೊಡೆದು ನೆಲಕ್ಕೆ ಬಿದ್ದುಬಿಟ್ಟಿತ್ತು ! ಎತ್ತಿಕೊಂಡರೆ ನನ್ನ ಉಸಿರಿನ ಸದ್ದಷ್ಟೇ ಕೇಳಿಸುತ್ತಿತ್ತು!



ಮೊನ್ನೆ ,ನಮ್ಮ ಮಕ್ಕಳು ಗುಂಪು ಕಟ್ಟಿಕೊಂಡು ಅಂಥದ್ದೇ ಹಕ್ಕಿಯನ್ನು ನಾಲ್ಕನೆಯ ಬಾರಿಗೆ ತಂದು ಕೈಗೊಪ್ಪಿಸಿದಾಗ ,'ಇದ್ಯಾಕಪ್ಪಾ ಈ ಪಕ್ಷಿ ಹೀಗೇ ಸಾಯುತ್ತೆ' ಎಂದು ಲೆಕ್ಕ ಹಾಕುತ್ತಾ ಕೂತಿದ್ದೆ.






ಅದನ್ನು ಕೈಯಲ್ಲಿ ಹಿಡಿದಾಗಲೂ,ಇಳಿಸಿದ ಮೇಲೂ, ನನ್ನ ಉಸಿರಿನ ಸದ್ದಷ್ಟೇ ಕೇಳಿಸುತ್ತಿದೆ!!
**

-ಕಾಜೂರು ಸತೀಶ್

Wednesday, January 14, 2015

ಜಲಸಮಾಧಿ

ತಾವರೆಯನ್ನೇ ನೋಡಿರದಿದ್ದ ಕಾಲದಲ್ಲಿ
ಮೊದಲ ಬಾರಿಗೆ
ತಾವರೆಯ ಚಿತ್ರ ಬರೆದೆ.



ಗದ್ದೆಯಲ್ಲಿ
ಒಂದು ಬಾತುಕೋಳಿ,
ಒಂದು ಹಂಸವೂ ಸುಳಿಯದ ಕಾಲದಲ್ಲಿ
ತಾವರೆಯ ಜೊತೆಗೆ
ಹಂಸವೊಂದರ ಚಿತ್ರ ಬರೆದೆ.



ಅದಾದ ಮೇಲೆ
ಹಂಸಗಳನ್ನೂ,
ತಾವರೆಗಳನ್ನೂ
ತುಂಬಿಕೊಂಡ ಕೊಳವೊಂದನ್ನು
ನೋಡುತ್ತಲೇ ಇದ್ದೇನೆ .



ಕಡಲನ್ನು ನೋಡಿರದಿದ್ದರೂ
ಆಳಸಮುದ್ರದ ನೀಲಿಯನ್ನೂ,
ಅಲೆಗಳ ಸಾಲುಗಳಲ್ಲಿ
ಜೋಕಾಲಿಯಾಡುವ ನನ್ನನ್ನೂ
ಬಿಡಿಸಿದೆ.



ಆಮೇಲೆ
ಹಂಸ,
ಕೊಳ,
ಸಮುದ್ರ ,
ಆಕಾಶದಿಂದಾಚೆಗೆ
ಹಾರಿಹೋದವು.



ನನ್ನ ಕ್ಯಾನ್ವಾಸಿನ ಸ್ಪಷ್ಪ ಗೆರೆಗಳ ತುಂಬ
ಚಿಮ್ಮುವ ತಾವರೆಗಳು
ಕೆಂಪು ,ನೀಲಿಗಳಿಂದ ಕೂಡಿದ
ಉಕ್ಕೇರುವ ಚಿತ್ರದ ಕೊಳಗಳು.




ಆಳ ತಿಳಿದ ಕೋಣದ ಹಾಗೆ
ಕೆಸರುಗೊಳದಲ್ಲಿ ಮುಳುಗೆದ್ದೆ.
ಕಿವಿಗಳ ಸುತ್ತ ಗುಂಯ್ಗುಡುವ
ಕೀಟಗಳ ಓಡಿಸಿದೆ.
ಬೆನ್ನ ಮೇಲಿನ ಕೊಕ್ಕರೆಗಳ ಓಡಿಸಿದೆ .
ಕೊಳದೊಳಗೇ ಸಮಾಧಿಯಾದೆ.



ಕಾಲ ತಪ್ಪಿ
ಅದರೊಳಗೆ ಅರಳಿತೊಂದು
ಬಿಳಿಯ ತಾವರೆ!

**

ಮಲಯಾಳಂ ಮೂಲ- ಬಿಂದು ಒ.ಎನ್.

ಕನ್ನಡಕ್ಕೆ - ಕಾಜೂರು ಸತೀಶ್

ಜಲಸಮಾಧಿ

ತಾವರೆಯನ್ನೇ ನೋಡಿರದಿದ್ದ ಕಾಲದಲ್ಲಿ
ಮೊದಲ ಬಾರಿಗೆ
ತಾವರೆಯ ಚಿತ್ರ ಬರೆದೆ.



ಗದ್ದೆಯಲ್ಲಿ
ಒಂದು ಬಾತುಕೋಳಿ,
ಒಂದು ಹಂಸವೂ ಸುಳಿಯದ ಕಾಲದಲ್ಲಿ
ತಾವರೆಯ ಜೊತೆಗೆ
ಹಂಸವೊಂದರ ಚಿತ್ರ ಬರೆದೆ.



ಅದಾದ ಮೇಲೆ
ಹಂಸಗಳನ್ನೂ,
ತಾವರೆಗಳನ್ನೂ
ತುಂಬಿಕೊಂಡ ಕೊಳವೊಂದನ್ನು
ನೋಡುತ್ತಲೇ ಇದ್ದೇನೆ .



ಕಡಲನ್ನು ನೋಡಿರದಿದ್ದರೂ
ಆಳಸಮುದ್ರದ ನೀಲಿಯನ್ನೂ,
ಅಲೆಗಳ ಸಾಲುಗಳಲ್ಲಿ
ಜೋಕಾಲಿಯಾಡುವ ನನ್ನನ್ನೂ
ಬಿಡಿಸಿದೆ.



ಆಮೇಲೆ
ಹಂಸ,
ಕೊಳ,
ಸಮುದ್ರ ,
ಆಕಾಶದಿಂದಾಚೆಗೆ
ಹಾರಿಹೋದವು.



ನನ್ನ ಕ್ಯಾನ್ವಾಸಿನ ಸ್ಪಷ್ಪ ಗೆರೆಗಳ ತುಂಬ
ಚಿಮ್ಮುವ ತಾವರೆಗಳು
ಕೆಂಪು ,ನೀಲಿಗಳಿಂದ ಕೂಡಿದ
ಉಕ್ಕೇರುವ ಚಿತ್ರದ ಕೊಳಗಳು.




ಆಳ ತಿಳಿದ ಕೋಣದ ಹಾಗೆ
ಕೆಸರುಗೊಳದಲ್ಲಿ ಮುಳುಗೆದ್ದೆ.
ಕಿವಿಗಳ ಸುತ್ತ ಗುಂಯ್ಗುಡುವ
ಕೀಟಗಳ ಓಡಿಸಿದೆ.
ಬೆನ್ನ ಮೇಲಿನ ಕೊಕ್ಕರೆಗಳ ಓಡಿಸಿದೆ .
ಕೊಳದೊಳಗೇ ಸಮಾಧಿಯಾದೆ.



ಕಾಲ ತಪ್ಪಿ
ಅದರೊಳಗೆ ಅರಳಿತೊಂದು
ಬಿಳಿಯ ತಾವರೆ!

**

ಮಲಯಾಳಂ ಮೂಲ- ಬಿಂದು ಒ.ಎನ್.

ಕನ್ನಡಕ್ಕೆ - ಕಾಜೂರು ಸತೀಶ್

ಜಲಸಮಾಧಿ

ತಾವರೆಯನ್ನೇ ನೋಡಿರದಿದ್ದ ಕಾಲದಲ್ಲಿ
ಮೊದಲ ಬಾರಿಗೆ
ತಾವರೆಯ ಚಿತ್ರ ಬರೆದೆ.



ಗದ್ದೆಯಲ್ಲಿ
ಒಂದು ಬಾತುಕೋಳಿ,
ಒಂದು ಹಂಸವೂ ಸುಳಿಯದ ಕಾಲದಲ್ಲಿ
ತಾವರೆಯ ಜೊತೆಗೆ
ಹಂಸವೊಂದರ ಚಿತ್ರ ಬರೆದೆ.



ಅದಾದ ಮೇಲೆ
ಹಂಸಗಳನ್ನೂ,
ತಾವರೆಗಳನ್ನೂ
ತುಂಬಿಕೊಂಡ ಕೊಳವೊಂದನ್ನು
ನೋಡುತ್ತಲೇ ಇದ್ದೇನೆ .



ಕಡಲನ್ನು ನೋಡಿರದಿದ್ದರೂ
ಆಳಸಮುದ್ರದ ನೀಲಿಯನ್ನೂ,
ಅಲೆಗಳ ಸಾಲುಗಳಲ್ಲಿ
ಜೋಕಾಲಿಯಾಡುವ ನನ್ನನ್ನೂ
ಬಿಡಿಸಿದೆ.



ಆಮೇಲೆ
ಹಂಸ,
ಕೊಳ,
ಸಮುದ್ರ ,
ಆಕಾಶದಿಂದಾಚೆಗೆ
ಹಾರಿಹೋದವು.



ನನ್ನ ಕ್ಯಾನ್ವಾಸಿನ ಸ್ಪಷ್ಪ ಗೆರೆಗಳ ತುಂಬ
ಚಿಮ್ಮುವ ತಾವರೆಗಳು
ಕೆಂಪು ,ನೀಲಿಗಳಿಂದ ಕೂಡಿದ
ಉಕ್ಕೇರುವ ಚಿತ್ರದ ಕೊಳಗಳು.




ಆಳ ತಿಳಿದ ಕೋಣದ ಹಾಗೆ
ಕೆಸರುಗೊಳದಲ್ಲಿ ಮುಳುಗೆದ್ದೆ.
ಕಿವಿಗಳ ಸುತ್ತ ಗುಂಯ್ಗುಡುವ
ಕೀಟಗಳ ಓಡಿಸಿದೆ.
ಬೆನ್ನ ಮೇಲಿನ ಕೊಕ್ಕರೆಗಳ ಓಡಿಸಿದೆ .
ಕೊಳದೊಳಗೇ ಸಮಾಧಿಯಾದೆ.



ಕಾಲ ತಪ್ಪಿ
ಅದರೊಳಗೆ ಅರಳಿತೊಂದು
ಬಿಳಿಯ ತಾವರೆ!

**

ಮಲಯಾಳಂ ಮೂಲ- ಬಿಂದು ಒ.ಎನ್.

ಕನ್ನಡಕ್ಕೆ - ಕಾಜೂರು ಸತೀಶ್