ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Sunday, July 27, 2014

ಬೆಂಕಿಯ ಬೀಜ

ರಣಹದ್ದಿನ ಶವವನ್ನು
ರಣಹದ್ದು ತಿನ್ನುವುದಿಲ್ಲ.
ಕೊಳೆತು ನಾರುವ ಮುನ್ನ
ಅದೊಂದು ವಿಮಾನವಾಗುತ್ತದೆ.ಯುದ್ಧಭೂಮಿಯೆಂದುಕೊಂಡು ಬಟಾಬಯಲಿನಲ್ಲಿ
ಹಾರಾಡಿ ಇಳಿಯುತ್ತದೆ .




ಚೆಂಡಿಲ್ಲದಿದ್ದರೂ ಫೂಟ್ಬಾಲ್ ಆಡುವ ಮಕ್ಕಳು
ಅದರ ಬಳಿ ಬಂದು
ಮುಟ್ಟಿ ,ಸವರಿ ಬೆರಗುಗೊಂಡು
ಕೆಲವರು ಅದರ ಒಳಗಿಳಿಯುತ್ತಾರೆ.
ಕೆಲವರು ಚಂಗನೆ ಜಿಗಿದು ಹತ್ತುತ್ತಾರೆ.
ಇನ್ನೂ ಕೆಲವರು ರೆಕ್ಕೆಗಳಲ್ಲಿ ತೂಗಾಡುತ್ತಾರೆ.







ಇದ್ದಕ್ಕಿದ್ದಂತೆ
ಯಾರೋ, ಹೇಗೋ ಕೀ ಕೊಟ್ಟ ಹಾಗೆ
ಮೈಕೊಡವುತ್ತಾ ವಿಮಾನ ಮೇಲೇರುತ್ತದೆ.
ಒಳಗೂ, ಹೊರಗೂ
ರೆಕ್ಕೆಗಳಲ್ಲೂ,ಕೊಕ್ಕಿನಲ್ಲೂ
ಬೆರಗಿನಿಂದ ಕುಳಿತ ,ನೇತಾಡುವ
ಮಕ್ಕಳ ಹೊತ್ತು ಹಾರುತ್ತದೆ.




ಮತ್ತೆ ಹಸಿವಾದಾಗ,
ಮುಗಿಲೆತ್ತರದ ಕಟ್ಟಡದಲ್ಲಿ ಕುಳಿತು
ಕೆಲವು ತುಂಟ ಮಕ್ಕಳ ಕುಕ್ಕಿ ತಿನ್ನುತ್ತದೆ.
ಹೊಟ್ಟೆ ತುಂಬಿದಾಗ ಮತ್ತೆ ಹಾರಿ
ನಗರಗಳಲ್ಲೂ, ಹಳ್ಳಿಗಳಲ್ಲೂ
ಬೆಂಕಿಯ ಬೀಜಗಳೊಂದಿಗೆ
ಆ ಮಕ್ಕಳನ್ನೂ ಚೆಂಡಿನಂತೆ ಎಸೆಯುತ್ತದೆ.
**



ಮಲಯಾಳಂ ಮೂಲ- ಮೋಹನಕೃಷ್ಣನ್ ಕಾಲಡಿ



ಕನ್ನಡಕ್ಕೆ - ಕಾಜೂರು ಸತೀಶ್

No comments:

Post a Comment