ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Saturday, May 24, 2014

ಬಾಧೆ

ಹಳ್ಳಿಗಳಲ್ಲಿ
ನಗರಗಳಲ್ಲಿ
ಒಬ್ಬನೇ ನಡೆದೆ.


ಸತ್ತೇ ಹೋಗಲಿ ಎಂದು
ವಾಹನಗಳು ಸರಿದಾಡುವ ಡಾಂಬರು ರಸ್ತೆಯಲ್ಲಿ
ಅಂಗಾತ ಮಲಗಿದೆ.


ಆಕಾಶದಷ್ಟೆತ್ತರದ ಆಲದ ಕೊಂಬೆಯಲ್ಲಿ
ಗುರುತ್ವವನ್ನೂ ಲೆಕ್ಕಿಸದೆ
ಕಾಲುಚಾಚಿ ಮಲಗಿದೆ.


ಬೆಂಕಿಯಲ್ಲಿ ಸ್ನಾನಮಾಡಿ
ಮಂಜುಗಡ್ಡೆಯ ಬಾಚಿ
ಮೈತುಂಬ ಹೊದ್ದು ಮಲಗಿದೆ.


ವಾಹನಗಳು ಛಿದ್ರಗೊಳಿಸಲಿಲ್ಲ
ಆಲದ ಕೊಂಬೆ ಮುರಿಯಲಿಲ್ಲ
ಬೆಂಕಿ ಸುಡಲಿಲ್ಲ
ಮಂಜುಗಡ್ಡೆ ಮೈಕೊರೆಯಲಿಲ್ಲ
ಯಾವ ತೊಂದರೆಯೂ ಇಲ್ಲದೆ
ಪ್ರತೀ ಬಾರಿ ಹಿಂತಿರುಗಿದೆ.


ಕೋಣೆಯ ಉದ್ದ ಕನ್ನಡಿಯ ಮುಂದೆ ನಿಂತು
ಅಡಿಯಿಂದ ಮುಡಿಯವರೆಗೆ ದಿಟ್ಟಿಸಿದೆ.


ಇಲ್ಲ
ನೀನಿನ್ನೂ ಪೂರ್ತಿ ಹೋಗಲಿಲ್ಲ
ಒಳಗೂ
ಹೊರಗೂ!
**


ಮಲಯಾಳಂ ಮೂಲ- ಸುಧೀಶ್ ಕೊಟ್ಟೆಂಬರಮ್

ಕನ್ನಡಕ್ಕೆ - ಕಾಜೂರು ಸತೀಶ್

No comments:

Post a Comment